ಗ್ರಾಮದೇವಿ ಜಾತ್ರೆಯ ಬಳಿಕ 48 ದಿನಗಳ ವಿಶೇಷ ಪೂಜೆ ಸಂಪನ್ನ
48 days of special pujas complete after the Grama Devi Jatra
ಸವದತ್ತಿ : 45 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಅತ್ಯಂತ ಯಶಸ್ವಿಯಾಗಿ ಮೇ 4 ರಂದು ನೆರವೇರಿದ ಶ್ರೀ ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಐತಿಹಾಸಿಕ ಗ್ರಾಮದೇವಿ ಜಾತ್ರಾ ಮಹೋತ್ಸವದ ಮುಕ್ತಾಯದ ಸಂಭ್ರಮದ ಅಂಗವಾಗಿ, ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 48 ದಿನಗಳ ವಿಶೇಷ ಪೂಜಾ ಕಾರ್ಯಕ್ರಮಗಳು ಸೋಮವಾರ ಸಂಪನ್ನಗೊಂಡವು. ಈ ಧಾರ್ಮಿಕ ಕಾರ್ಯಕ್ರಮಗಳ ಸರಣಿಯ ಭಾಗವಾಗಿ ಶನಿವಾರ ದೇವಸ್ಥಾನದಲ್ಲಿ ವಿಶೇಷ ಹೋಮ ಮತ್ತು ಗೊಂಬಿ ಪೂಜೆಗಳನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ದಶಕಗಳ ನಂತರ ಅತ್ಯಂತ ವೈಭವೋಪೇತವಾಗಿ ನಡೆದ ಗ್ರಾಮದೇವಿ ಜಾತ್ರೆಯು ತಾಲೂಕಿನ ಸಮಸ್ತ ಭಕ್ತರ ಒಗ್ಗಟ್ಟಿನ ಪ್ರತೀಕವಾಗಿದೆ. ಇಂದು ನೆರವೇರಿದ ವಿಶೇಷ ಹೋಮ ಹಾಗೂ ಗೊಂಬಿ ಪೂಜೆಯು ದೇವಸ್ಥಾನದ ಪಾವಿತ್ರ್ಯತೆಯನ್ನು ಹೆಚ್ಚಿಸಿದೆ, ಎಂದರು.ತಾಯಿ ದ್ಯಾಮವ್ವ ಮತ್ತು ದುರ್ಗವ್ವ ದೇವಿಯ ದಿವ್ಯ ಅನುಗ್ರಹವು ತಾಲೂಕಿನ ಸಮಸ್ತ ಜನರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸಿದ ಅವರು, ನಾಡಿನಲ್ಲಿ ಸುಭಿಕ್ಷೆ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು. ಅಶ್ವಥ್ ವೈದ್ಯ, ಭರಮಪ್ಪ ಅಣಿಗೇರಿ, ಶಿವಾನಂದ ಹೂಗಾರ, ಎನ್.ಸಿ.ಬೆಂಡಿಗೇರಿ,ಬಸವರಾಜ ಅರಮನಿ, ಮೈಲಾರ್ಪ ಹೊಸಮನಿ, ಮಂಜುನಾಥ ಪಾಚಂಗಿ, ಮಲ್ಲಿಕಾರ್ಜುನ ಬೇವೂರ,ಗೀರೀಶ್ ಮುನವಳ್ಳಿ, ಲಕ್ಷ್ಮಣ ಕುಲಕರ್ಣಿ, ಹಾಗೂ ಊರಿನ ಗಣ್ಯರು, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 