2ನೇ ಯುವ ಚಿಂತನಾ ಸಮಾವೇಶ: 2025

2ನೇ ಯುವ ಚಿಂತನಾ ಸಮಾವೇಶ: 2025 2nd Youth Thinking Conference: 2025

ಧಾರವಾಡ 04: ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ವತಿಯಿಂದ ಯುವ ಸಮುದಾಯ, ಯುವ ಕೃಷಿಕರು, ಯುವ ಬರಹಗಾರರ ಚಿಂತನೆ, ಮಹಿಳಾ ಸಬಲೀಕರಣ, ಸಾಂಸ್ಕೃತಿಕ ಕಲೆಗಳು ಪರಿಸರದ ಚಿಂತನ-ಮಂಥನ ಹಾಗೂ ಕೃತಕ ಬುದ್ದಿಮತ್ತೆಯಲ್ಲಿ ಇತ್ತೀಚಿನ ಪ್ರಗತಿಗಳ  ಹೆಸರಿನಲ್ಲಿ 2ನೇ ಯುವಚಿಂತನಾ ಸಮಾವೇಶ-2025 ಹಾಗೂ ವಿವಿಧ ಕ್ಷೇತ್ರಗಳ ಸಾಧಕರು, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು, ಕಾರ್ಮಿಕರು, ಸಂಘಟಕರು, ರಕ್ತ/ದೇಹ ದಾನ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮವನ್ನು ನವ್ಹೆಂಬರ ತಿಂಗಳು ಹಾವೇರಿ, ಧಾರವಾಡ ಜಿಲ್ಲೆಗಳ ವಿವಿಧ 17 ಕಾಲೇಜುಗಳಲ್ಲಿ ಮತ್ತು ಎಂಟು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಾಗೂ ಡಿಸೆಂಬರ 7 ರಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.  

ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಮಾತಾಂರ್ಡಪ್ಪ ಕತ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.