ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ
26th Sadhana Saptaha of Brahmalina Narasimheswar Maharaja
ಲೋಕದರ್ಶನ ವರದಿ
ಹಾವೇರಿ 22 : ನಗರದ ಕೃಷ್ಣ ದೇವಸ್ಥಾನದ ಬಳಿ ಇರುವ ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಹಾಗೂ ಯೋಗ ಮಂದಿರದಲ್ಲಿ ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ ದಿ,23 ಶನಿವಾರ ಹಾಗೂ 24ರ ರವಿವಾರ ಜರುಗಲಿದೆ. 23 ರಂದು ಮುಂಜಾನೆ 5-00ಗಂಟೆಗೆ ಕಾಕಡಾರತಿ ನಂತರ 10-00ಗಂಟೆಗೆ ವೀಣಾ ಪೂಜೆಯ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. ಆಗಮಿಸಿದ ಸಂತರಿಂದ ಭಜನೆ-ಪ್ರವಚನ ನಂತರ ಮಹಾಪ್ರಸಾದ ಜರುಗಲಿದೆ. ಸಂಜೆ 7-00ಗಂಟೆಗೆ ಪಾಲಕಿ ಸೇವೆ ಮತ್ತು ಮಹಾರಾಜರ ಭಾವಚಿತ್ರ ಮೆರವಣಿಗೆ ಜರುಗುವದು.24 ರಂದು ಬೆಳಗಿನ ಜಾವ ಕಾಕಡಾರತಿ ನಂತರ ಅನುಭವಿ ಸಂತರಿಂದ ಧ್ಯಾನ, ದಾಸ ಭೋಧ-ವಾಚನ ನಂತರ ಯಲ್ಲಟ್ಟಿಯ ನಿಂಗರಾಜ ಮಹಾರಾಜ ಹಾಗೂ ಚೈತನ್ಯ ಮಹಾರಾರರಿಂದ ಆಶೀರ್ವಚನ ನಂತರ ಪುಷ್ಪವೃಷ್ಠಿ ಹಾಗೂ ಮಹಾಪ್ರಸಾದ ಜರುಗಲಿದೆ.ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 