ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ
26th Sadhana Saptaha of Brahmalina Narasimheswar Maharaja
ಲೋಕದರ್ಶನ ವರದಿ
ಹಾವೇರಿ 22 : ನಗರದ ಕೃಷ್ಣ ದೇವಸ್ಥಾನದ ಬಳಿ ಇರುವ ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಹಾಗೂ ಯೋಗ ಮಂದಿರದಲ್ಲಿ ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ ದಿ,23 ಶನಿವಾರ ಹಾಗೂ 24ರ ರವಿವಾರ ಜರುಗಲಿದೆ. 23 ರಂದು ಮುಂಜಾನೆ 5-00ಗಂಟೆಗೆ ಕಾಕಡಾರತಿ ನಂತರ 10-00ಗಂಟೆಗೆ ವೀಣಾ ಪೂಜೆಯ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. ಆಗಮಿಸಿದ ಸಂತರಿಂದ ಭಜನೆ-ಪ್ರವಚನ ನಂತರ ಮಹಾಪ್ರಸಾದ ಜರುಗಲಿದೆ. ಸಂಜೆ 7-00ಗಂಟೆಗೆ ಪಾಲಕಿ ಸೇವೆ ಮತ್ತು ಮಹಾರಾಜರ ಭಾವಚಿತ್ರ ಮೆರವಣಿಗೆ ಜರುಗುವದು.24 ರಂದು ಬೆಳಗಿನ ಜಾವ ಕಾಕಡಾರತಿ ನಂತರ ಅನುಭವಿ ಸಂತರಿಂದ ಧ್ಯಾನ, ದಾಸ ಭೋಧ-ವಾಚನ ನಂತರ ಯಲ್ಲಟ್ಟಿಯ ನಿಂಗರಾಜ ಮಹಾರಾಜ ಹಾಗೂ ಚೈತನ್ಯ ಮಹಾರಾರರಿಂದ ಆಶೀರ್ವಚನ ನಂತರ ಪುಷ್ಪವೃಷ್ಠಿ ಹಾಗೂ ಮಹಾಪ್ರಸಾದ ಜರುಗಲಿದೆ.ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 