ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ

ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ  26ನೇ ಸಾಧನ ಸಪ್ತಾಹ 26th Sadhana Saptaha of Brahmalina Narasimheswar Maharaja

ಲೋಕದರ್ಶನ ವರದಿ 

ಹಾವೇರಿ 22 : ನಗರದ ಕೃಷ್ಣ ದೇವಸ್ಥಾನದ ಬಳಿ ಇರುವ ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಹಾಗೂ ಯೋಗ ಮಂದಿರದಲ್ಲಿ ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ  26ನೇ ಸಾಧನ ಸಪ್ತಾಹ  ದಿ,23 ಶನಿವಾರ  ಹಾಗೂ 24ರ ರವಿವಾರ ಜರುಗಲಿದೆ. 23 ರಂದು ಮುಂಜಾನೆ 5-00ಗಂಟೆಗೆ ಕಾಕಡಾರತಿ ನಂತರ 10-00ಗಂಟೆಗೆ ವೀಣಾ ಪೂಜೆಯ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. ಆಗಮಿಸಿದ ಸಂತರಿಂದ ಭಜನೆ-ಪ್ರವಚನ ನಂತರ ಮಹಾಪ್ರಸಾದ ಜರುಗಲಿದೆ. ಸಂಜೆ 7-00ಗಂಟೆಗೆ ಪಾಲಕಿ ಸೇವೆ ಮತ್ತು ಮಹಾರಾಜರ ಭಾವಚಿತ್ರ ಮೆರವಣಿಗೆ ಜರುಗುವದು.24 ರಂದು ಬೆಳಗಿನ ಜಾವ ಕಾಕಡಾರತಿ ನಂತರ ಅನುಭವಿ ಸಂತರಿಂದ ಧ್ಯಾನ, ದಾಸ ಭೋಧ-ವಾಚನ  ನಂತರ ಯಲ್ಲಟ್ಟಿಯ ನಿಂಗರಾಜ ಮಹಾರಾಜ ಹಾಗೂ ಚೈತನ್ಯ ಮಹಾರಾರರಿಂದ ಆಶೀರ್ವಚನ ನಂತರ ಪುಷ್ಪವೃಷ್ಠಿ ಹಾಗೂ  ಮಹಾಪ್ರಸಾದ ಜರುಗಲಿದೆ.ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.