ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ
26th Sadhana Saptaha of Brahmalina Narasimheswar Maharaja
ಲೋಕದರ್ಶನ ವರದಿ
ಹಾವೇರಿ 22 : ನಗರದ ಕೃಷ್ಣ ದೇವಸ್ಥಾನದ ಬಳಿ ಇರುವ ನರಸಿಂಹೇಶ್ವರ ಮಹಾರಾಜರ ಆಧ್ಯಾತ್ಮಿಕ ಹಾಗೂ ಯೋಗ ಮಂದಿರದಲ್ಲಿ ಬ್ರಹ್ಮಲೀನ ನರಸಿಂಹೇಶ್ವರ ಮಹಾರಾಜರ 26ನೇ ಸಾಧನ ಸಪ್ತಾಹ ದಿ,23 ಶನಿವಾರ ಹಾಗೂ 24ರ ರವಿವಾರ ಜರುಗಲಿದೆ. 23 ರಂದು ಮುಂಜಾನೆ 5-00ಗಂಟೆಗೆ ಕಾಕಡಾರತಿ ನಂತರ 10-00ಗಂಟೆಗೆ ವೀಣಾ ಪೂಜೆಯ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. ಆಗಮಿಸಿದ ಸಂತರಿಂದ ಭಜನೆ-ಪ್ರವಚನ ನಂತರ ಮಹಾಪ್ರಸಾದ ಜರುಗಲಿದೆ. ಸಂಜೆ 7-00ಗಂಟೆಗೆ ಪಾಲಕಿ ಸೇವೆ ಮತ್ತು ಮಹಾರಾಜರ ಭಾವಚಿತ್ರ ಮೆರವಣಿಗೆ ಜರುಗುವದು.24 ರಂದು ಬೆಳಗಿನ ಜಾವ ಕಾಕಡಾರತಿ ನಂತರ ಅನುಭವಿ ಸಂತರಿಂದ ಧ್ಯಾನ, ದಾಸ ಭೋಧ-ವಾಚನ ನಂತರ ಯಲ್ಲಟ್ಟಿಯ ನಿಂಗರಾಜ ಮಹಾರಾಜ ಹಾಗೂ ಚೈತನ್ಯ ಮಹಾರಾರರಿಂದ ಆಶೀರ್ವಚನ ನಂತರ ಪುಷ್ಪವೃಷ್ಠಿ ಹಾಗೂ ಮಹಾಪ್ರಸಾದ ಜರುಗಲಿದೆ.ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರು ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 