ಸ್ಕೌಟ್ ಸಂಸ್ಥಾಪಕ ಬೆಡನ್ ಪೋವೆಲರ 169 ನೇ ಜನ್ಮದಿನಾಚರಣೆ
169th Birthday of Scout Founder Bedon Powell
ಸ್ಕೌಟ್ ಸಂಸ್ಥಾಪಕ ಬೆಡನ್ ಪೋವೆಲರ 169 ನೇ ಜನ್ಮದಿನಾಚರಣೆ
ಕಾಗವಾಡ 25: ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸ್ಕೌಟ್ ಮತ್ತು ಗೈಡ್ ಮತ್ತು ಸ್ಥಳೀಯ ಸಂಸ್ಥೆ ಕಾಗವಾಡ ಇವರ ಸಹಯೋಗದಲ್ಲಿ ಸ್ಕೌಟ್ ಸಂಸ್ಥಾಪಕರಾದ ಬೆಡನ್ ಪೋವೆಲ್ ಅವರ 169 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಇದರ ಅಂಗವಾಗಿ ಸ್ಕೌಟ ಮತ್ತು ಗೈಡ್ ಮಕ್ಕಳ ಮೇಳವನ್ನು ಕೂಡ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ಸ್ಕೌಟ್ ಮತ್ತು ಗೈಡ್ ನ ಧ್ವಜಾರೋಹಣದೊಂದಿಗೆ ಪ್ರಾರಂಭಿಸಲಾಯಿತು.ಮಕ್ಕಳ ಮೇಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ,ಎಂ.ವಿ.ಇನಾಮದಾರ,ಎಸ್ ಐ ಹಳಿಗೌಡರ,ಸಹಾಯಕ ರಾಜ್ಯ ಸಂಘಟನಾ ಆಯುಕ್ತರು(ಸ್ಕೌಟ್) ಡಿ.ಬಿ.ಅತ್ತಾರ,ಜಿಲ್ಲಾ ಸಂಘಟನಾ ಶಿಕ್ಷಕರಾದ ಎನ್ ಜಿ ಪಾಟೀಲ್,ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಕೆ.ಕಾಂಬಳೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಇದೆ ವೇಳೆ ಮಾತನಾಡಿದ ಜಿಲ್ಲಾ ಸಂಘಟನಾ ಶಿಕ್ಷಕರಾದ ಎನ್ ಜಿ ಪಾಟೀಲ್,ಮಕ್ಕಳಿಗೆ ಸ್ಕೌಟ್ ಮತ್ತು ಗೈಡ್ ನಿಂದ ದೇಶ ಪ್ರೇಮದ ಜೊತೆ ದೇಶಕ್ಕೆ ನೀಡಬೇಕಾದ ಗೌರವದ ಬಗ್ಗೆ ವಿವರವಾಗಿ ಹೇಳಿದರು.ನಂತರ ಬಿಇಒ ಎಂ ಆರ್ ಮುಂಜೆ ಮಾತನಾಡಿ,ಮಕ್ಕಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವದು ಅವಶ್ಯಕವಾಗಿದೆ ಇದರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ಆಗಬೇಕೆಂದರು.ಈ ವೇಳೆ ಆರ್ ಬಿ ಲಂಗೋಟೆ,ಪ್ರಕಾಶ ಕುಂಬಾರ,ನೇತಾಜಿ ತಳವಾರ,ಪಿ ಎ ಪನದೆ,ಅರುಣ ಮುಜಾವರ,ರವಿ ಗಾಣಿಗೇರ,ಮೆಡಂ ಹುಡೇದ,ಎಮ್ ಆರ್ ಮಟಾಲೆ,ಕಲ್ಲೊಳೆ,ವಾಘಮೋಡೆ,ಸಿ ಎಂ.ಸಂತೋಷ,ಎ ಎಸ್ ಪೂಜಾರಿ,ಮಮದಾಪೂರ ಮೆಡಂ,ಸುನಂದಾ ನಾಯಕ,ಪ್ರವೀಣ ಕಲ್ಲೋಳಿ,ಎ ಆರ್ ಕಾಂಬಳೆ,ಗಣೇಶ ಹೊನಕಾಂಬಳೆ,ಶಿವಶಾಂತ ಜಿರಗ್ಯಾಳೆ ಸೇರಿದಂತೆ ಅನೇಕರು ಇದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 