15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ಬಿಡುಗಡೆ
15th year Gautama Suryasiddhanta Panchanga released
15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ಬಿಡುಗಡೆ
ಬಳ್ಳಾರಿ 23: ಭಾನುವಾರ ಬಳ್ಳಾರಿಯ ಸತ್ಯನಾರಾಯಣ ಪೇಟೆಯ ಸುಶಮೀಂದ್ರ ಮಂಗಳ ಮಂಟಪದ ಆವರಣದಲ್ಲಿ ಜ್ಯೋತಿಶ್ಯರತ್ನ, ಮಧ್ವವಿಜಯ, ಹಾಗೂ ರಾಘವೇಂದ್ರ ವೈಭವ ಪ್ರಶಸ್ತಿ ಪುರಸ್ಕ್ರುತರಾದ ಗುರುರಾಜ ಕುಲಕರ್ಣಿಯವರಿಂದ ವಿರಚಿತ 15 ನೇ ವರ್ಷದ ಗೌತಮ ಸೂರ್ಯಸಿದ್ಧಾಂತ ಪಂಚಾಂಗ ವನ್ನು ಅನಿಲ್ ಆಚಾರ್ ಇವರ ಅಧ್ವೈರ್ಯದಲ್ಲಿ ಚಂಡಿ ಹೋಮಕ್ಕೆ ಪೂರ್ಣಾಹುತಿಯ ನಂತರ ವಿದ್ಯಾಸಿಂಧು ಮಾಧವ ತೀರ್ಥರ ಆಶೀರ್ವಚನದೊಂದಿಗೆ ಬಿಡುಗಡೆ ಮಾಡಲಾಯಿತು.
ಪ್ರಸನ್ನ ಮಾಧವ ಗುಡಿ (ಸ್ವರ ಮಹಾ ಯಜ್ಞಯ್ ಸಂಶೋಧಕರು ಹಾಗೂ ಸಂಗೀತ ಚಿಕಿತ್ಸಕರು, ಆಕಾಶವಾಣಿ ಕಲಾವಿದರು) ಇವರು ಸಂಗೀತ ಚಿಕಿತ್ಸೆಯಕಾರ್ಯಕ್ರಮ ( ಒಛಿ ಖಿಜಡಿಚಿಠಿಥಿ) ನೀಡಿದರು. ವಿದ್ಯಾಸಿಂಧು ಮಾಧವ ತೀರ್ಥರು ನೆರೆದ ಭಕ್ತಾದಿಗಳಿಗೆ ಆಶೀರ್ವಚನದೊಂದಿಗೆ ನೀಡಿದರು.
ಪಂಡಿತ್ ಗುರುರಾಜಾರ್ ರವರ ವೇದಘೋಷದೊಂದಿಗೆ ಕುಮಾರಿ ವಸುಧಾ ಹಾಗೂ ಸಂಜೀವಪ್ರಸಾದ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಅನೇಕ ಭಜನಾ ಮಂಡಳಿಗಳಿಂದ ಗೀತಗಾಯನ ಹಾಗೂ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮವೂ ನೆರವೇರಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 