14ರಂದು ಲಿಂಗಾಯತ, ಜಂಗಮ ವಧು ವರರ ಬೃಹತ್ ಸಮಾವೇಶ
ಲೋಕದರ್ಶನ ವರದಿ
ಗದಗ 10: ಗದಗದಲ್ಲಿ ವೀರಶೈವ ಲಿಂಗಾಯತ ಮತ್ತು ಜಂಗಮ ವಧು ವರರ ಬೃಹತ್ ಸಮಾವೇಶವನ್ನು 25 ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಈ ಸಲವು ಗದಗ ನಗರದ ಚೇಂಬರ್ ಆಫ್ ಕಾಮಸರ್್ ಎಪಿಎಮ್ಸಿ ಹಾಲ ಗದಗದಲ್ಲಿ ದಿ. 14ರಂದು ಮುಂಜಾನೆ 11.00ರಿಂದ ಮಧ್ಯಾಹ್ನ 03.00 ಘಂಟೆಗಳ ವರೆಗೆ ವಧು ವರರ ಅನ್ವೇಷಣೆ ಇರುವುದು ಎಂದು ಅಧ್ಯಕ್ಷರು ಆದ ರವಿ ಹಂದಿಗೋಳ ತಿಳಿಸಿದರು.
ಈ ಸಮಾವೇಶದಲ್ಲಿ ವಧು ವರರನ್ನು ಪರಸ್ಪರ ಪರಿಚಯಿಸಲಾಗುವುದು, ಅಪೇಕ್ಷೆ ಹೊಂದಿದ ವಧು ವರರು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು, ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದರು.ಈ ಸಮಾವೇಶದಲ್ಲಿ ಬರುವ ವಧು ವರರು 2 ಭಾವಚಿತ್ರ (ಪೋಟೋ) ಮತ್ತು ಜಾತಕದೊಂದಿಗೆ ಭಾಗವಹಿಸಬಹುದು ವಿಧವೆ, ವಿಧುರ, ಮರು ವಿವಾಹ ಆಗಬಯಸುವವರು ಅಂಗವಿಕಲರು, ಪಾಲಕರು ಸಹ ಭಾಗವಹಿಸಬಹುದು ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ನ ಅದ್ಯಕ್ಷರಾದ ರವಿ ಹಂದಿಗೋಳ, ಕಾರ್ಯದಶರ್ಿಗಳು ಶಕುಂತಲಾ ನಂದಿಮಠ, ಮತ್ತು ಕನರ್ಾಟಕ ವೀರಶೈವ ವಧು ವರರ ಅಧ್ಯಕ್ಷರು ಆದ ಶಿವಕುಮಾರ ಹಿರೇಮಠ ಹಾಗೂ ಪ್ರಕಾಶ ಅಂಗಡಿ ಭಾಗಿಯಾಗಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 