ಇ-ಪೋತಿ ಆಂದೋಲನದಲ್ಲಿ 11 ಅರ್ಜಿಗಳು ಸ್ವೀಕೃತ : ಹಂತ ಹಂತದಲ್ಲಿ ವಿಲೇವಾರಿಗೆ ಕ್ರಮ

 ಇ-ಪೋತಿ ಆಂದೋಲನದಲ್ಲಿ 11 ಅರ್ಜಿಗಳು ಸ್ವೀಕೃತ : ಹಂತ ಹಂತದಲ್ಲಿ ವಿಲೇವಾರಿಗೆ ಕ್ರಮ 11 applications received in e-Pothi movement: Action for phased disposal

ಲೋಕದರ್ಶನ ವರದಿ

ಇ-ಪೋತಿ ಆಂದೋಲನದಲ್ಲಿ 11 ಅರ್ಜಿಗಳು ಸ್ವೀಕೃತ : ಹಂತ ಹಂತದಲ್ಲಿ ವಿಲೇವಾರಿಗೆ ಕ್ರಮ  

ಕಂಪ್ಲಿ 04:  ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು. ತಾಲೂಕಿನ ಮೆಟ್ರಿಯ ಗ್ರಾಪಯ ಕಛೇರಿಯಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇ-ಪೋತಿ ಆಂದೋಲನ ಹಾಗೂ ಪಿಂಚಣಿ ದಿನದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಫಲಾನುಭವಿಗಳು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಪಂದಿಸಿ ಕೆಲಸ ಮಾಡಿಸಿಕೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳ ನಿರ್ವಹಣೆ ಸಂಬಂಧ ಸಾರ್ವಜನಿಕ ಸೇವೆ ಪಾರದರ್ಶಕವಾಗಿಡಲು ಮುಂದಾಗಿದೆ. ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಡಲು ಪೌತಿ ಖಾತೆ ಆಂದೋಲನ ಮಾಡಲಾಗುತ್ತಿದೆ. ಜಮೀನಿನ ಅನುಭವದಲ್ಲಿ ಇದ್ದರೂ ಪಿತ್ರಾರ್ಜಿತ ಆಸ್ತಿಯ ಹಕ್ಕು ಪಡೆಯಲು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ. ಹಿರಿಯರ ಮರಣ ಪ್ರಮಾಣ ಪತ್ರ ಇಲ್ಲದೆ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಕಾನೂನಾತ್ಮಕ ನೆರವನ್ನು ನೀಡಲಾಗುವುದು ಎಂದರು. ನಂತರ ಗ್ರಾಮ ಆಡಳಿತಾಧಿಕಾರಿ ಶಿವಪುತ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಇ ಪೋತಿಯಲ್ಲಿ 11 ಅರ್ಜಿಗಳು ಬಂದಿದ್ದು, ಮರಣಕ್ಕೆ ಸಂಬಂಧಿಸಿದಂತೆ 18 ಅರ್ಜಿಗಳು ಸ್ವೀಕತಗೊಂಡಿದ್ದು, ಇನ್ನಷ್ಟು ಅರ್ಜಿಗಳು ಬರಲಿವೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ವೀರಶೈವ ಸಮಾಜದ ತಾಲೂಕು ಉಪಾಧ್ಯಕ್ಷ ಹೊನ್ನಳ್ಳಿ ಶಿವಪುತ್ರ​‍್ಪ ಮೆಟ್ರಿ, ಕಂದಾಯ ಇಲಾಖೆಯ ಆರ್‌ಐ ಜಗದೀಶ, ಮುಖಂಡರಾದ ಸಿ.ಡಿ.ಮಹಾದೇವ ಸೇರಿದಂತೆ ಅನೇಕರಿದ್ದರು.  


ಜ.001: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ನಡೆದ ಇ ಪೋತಿ ಆಂದೋಲನಾ ಕಾರ್ಯಕ್ರಮದಲ್ಲಿ ಪಹಣಿಯಲ್ಲಿರುವ ಇನಾಂ ರದ್ದು ಮಾಡುವಂತೆ ರೈತ ಮುಖಂಡ ಹೊನ್ನಳ್ಳಿ ಗಂಗಾಧರ ಇವರು ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಮನವಿ ಪತ್ರ ಸಲ್ಲಿಸಿದರು.