ದತ್ತಾತ್ರೇಯ ದೇವಸ್ಥಾನದಲ್ಲಿ 107 ನೇ ದತ್ತ ಜಯಂತಿ ಆಚರಣೆ

ದತ್ತಾತ್ರೇಯ ದೇವಸ್ಥಾನದಲ್ಲಿ 107 ನೇ ದತ್ತ ಜಯಂತಿ ಆಚರಣೆ 107th Datta Jayanti Celebrations at Dattatreya Temple

           ಹಾನಗಲ್ 13 : ಇಲ್ಲಿನ ದತ್ತಾತ್ರೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 107 ನೇ ದತ್ತ ಜಯಂತಿಯಲ್ಲಿ ಶಾಸಕ ಶ್ರೀನಿವಾಸ ಮಾನೆ ಭಾಗವಹಿಸಿ, ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮ, ವಿಷ್ಣು, ಮಹೇಶ್ವರ ಈ ತ್ರಿಮೂರ್ತಿಗಳ ಅವತಾರವಾಗಿ ಮಹಾಯೋಗಿ ದತ್ತನನ್ನು ಪೂಜಿಸಲಾಗುತ್ತಿದೆ. ದತ್ತ ಅಖಂಡ ಗುರುಪಂಪರೆಯ ಮೂಲಸ್ತಂಭ, ಮಾನವಕುಲಕ್ಕೆ ದಾರೀದೀಪವಾಗಲು ತೆಗೆದಕೊಂಡ ಅವತಾರ. ಮಾರ್ಗದರ್ಶನ, ಆತ್ಮಶುದ್ಧಿ, ಸೇವೆಯ ಸಂಕೇತವಾಗಿ ದತ್ತ ಜಯಂತಿ ಆಚರಿಸಲಾಗುತ್ತಿದೆ ಎಂದು ಶಾಸಕ ಮಾನೆ ಈ ಸಂದರ್ಭದಲ್ಲಿ ತಿಳಿಸಿದರು. 

          ಮುಖ್ಯ ಅರ್ಚಕ ಮುಕುಂದಭಟ್ ಕಾಗಿನೆಲ್ಲಿ, ಮುಖಂಡರಾದ ರವಿ ದೇಶಪಾಂಡೆ, ಘನಶ್ಯಾಮ ದೇಶಪಾಂಡೆ, ವಿದ್ಯಾಶಂಕರ ದೇಶಪಾಂಡೆ, ವಿನಯ ಬಂಕನಾಳ, ವಲ್ಲಭ ಜೋಶಿ, ಕೃಷ್ಣ ಪೂಜಾರ ಸೇರಿದಂತೆ ವಿಪ್ರ ಸಮಾಜದ ಪದಾಧಿಕಾರಿಗಳು, ಜಯಂತಿ ಸಮಿತಿಯ ಪ್ರಮುಖರು, ಸದ್ಭಕ್ತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.