1100 ಆಶ್ರಯ ಮನೆಗಳ ಯೋಜನೆ; ಅಂತಿಮ ಹಂತದಲ್ಲಿ 672 ಮನೆಗಳ ನಿರ್ಮಾಣ
1,100 Ashraya housing scheme; construction of 672 houses in the final stage
ಲೋಕದರ್ಶನ ವರದಿ
ದಾಂಡೇಲಿ 31 : ದಾಂಡೇಲಿಯ ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ 1100 ಜಿ+2 ಆಶ್ರಯ ಮನೆಗಳ ಆಯ್ಕೆಯಾದ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಆವಾಸ ಯೀಜನೆಯಡಿ ಬ್ಯಾಂಕ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ನಗರಸಭಾ ಸಂಭಾಂಗಣದಲ್ಲಿ ಸಾಲಮೇಳವನ್ನು ಏರಿ್ಡಸಲಾಗಿತ್ತು ಈ ಸಾಲ ಮೇಳ ಕಾರ್ಯಕ್ರಮವನ್ನು ಪೌರಾಯುಕ್ತ ವಿವೇಕ್ ಬನ್ನೆ ಚಾಲನೆ ನೀಡಿದರು. ಅವರು ಮಾತನಾಡಿ ಅಂಬೇವಾಡಿಯಲ್ಲಿ ನಿರ್ಮಾಣವಾಗುತ್ತಿರುವ 1100 ಜಿ+2 ಆಶ್ರಯ ಮನೆಗಳ ಪೈಕಿ ಈಗಾಗಲೇ 108 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಪೂರ್ಣಗೊಂಡಿರುವ 84 ಮನೆಗಳ ಹಸ್ತಾಂತರ ಕಾರ್ಯ ಸಧ್ಯದಲ್ಲೇ ನಡೆಯಲಿದೆ.
ಉಳಿದಂತೆ 672ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈಗಾಗಲೇ ವಿತರಣೆ ಮಾಡಿರುವ ಹಾಗೂ ವಿತರಣೆ ಮಾಡಲಿರುವ ಒಟ್ಟು 192 ಫಲಾನುಭವಿಗಳಿಗೆ ಬ್ಯಾಂಕ ಸಾಲ ಸೌಲಭ್ಯ ಕಲ್ಪಿಸುವುದು ಈ ಸಾಲ ಮೇಳದ ಉದ್ದೇಶವಾಗಿದೆ ಎಂದು ನುಡಿದರು. ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಲೊಕೇಶ ಅವರು ಸಾಲ ಮೇಳದಲ್ಲಿ ಭಾಗವಹಿಸಿರುವ ಫಲಾನುಭವಿಗಳಿಗೆ ಸಾಲಕ್ಕಾಗಿ ಸಲ್ಲಿಸಬೇಕಾಗಿರುವ ದಾಖಲಾತಿ ಪತ್ರಗಳ ಕುರಿತು ವಿವರಿಸಿ, ಸಾಲ ಮರು ಪಾವತಿಯ ಕುರಿತು ಮಾಹಿತಿ ನೀಡಿದರು. ವಿವಿಧ ಬ್ಯಾಂಕಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ನಗರಸಭೆಯ ಸಮುದಾಯದ ಸಂಘಟನಾ ಅಧಿಕಾರಿ ಶಿವಪ್ಪಾ ಸ್ವಾಗತಿಸಿ ವಂದಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 