ಕೇಂದ್ರ ಕಾರಾಗೃಹದಲ್ಲಿ “ವಿಶ್ವ ಪರಿಸರ ದಿನ” ಆಚರಣೆ
ಬೆಳಗಾವಿ 06: ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಏರಿ್ಡಸಲಾಗಿತ್ತು. ಸದರಿ ಕಾರ್ಯಕ್ರಮವು ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌಽಽ ನ್ಯಾಯಾಧೀಶರಾದ ಶ್ರೀ ಸಂದೀಪ ಪಾಟೀಲ ಇವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕೇಂದ್ರ ಕಾರಾಗೃಹ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅಥಿತಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಿಶಾಲ ಪಾಟೀಲ, ತೋಟಗಾರಿಕೆ ಇಲಾಖೆಯ ಉಪ ನಿದೆೇರ್ಶಕರಾದ ಮಹಾಂತೇಶ ಮುರಗೋಡ ಹಾಗೂ ಮಾಜಿ ಮಹಾಪೌರರಾದ ವಿಜಯ ಮೋರೆ ಆಗಮಿಸಿದರು. ಅಧ್ಯಕ್ಷತೆಯನ್ನು ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕರಾದ ವಿ ಕೃಷ್ಣಮೂರ್ತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರಾಗೃಹದ ತೋಟದಲ್ಲಿ ಹಾಗೂ ಒಳಾಂಗದಲ್ಲಿ ಹಣ್ಣು ಹಾಗೂ ಹೂವಿನ ಸಸಿಗಳನ್ನು ನೆಡಲಾಯಿತು. ಸಸಿಗಳಿಗೆ ನೀರೂಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲಣೆ ನೀಡಿದ ಗೌಽಽ ನ್ಯಾಯಾಧೀಶರಾದ ಸಂದೀಪ ಪಾಟೀಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು. ಪರಿಸರ ನಾಶದಿಂದ ಅನೇಕ ಸಮಸ್ಯಗಳು ಉದ್ಬವಿಸುತಿದ್ದು, ಮುಂದಿನ ಪೀಳಿಗೆಗೆ ಮಾರಕವಾಗಲಿದ್ದು ಕಾರಣ ನಾವೆಲ್ಲ ಪರಿಸರ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ಪರಿಸರ ರಕ್ಷಣೆ ನಮ್ಮ ದಿನನಿತ್ಯದ ಜೀವನದ ಅಂಗವಾಗಬೇಕು. ಪ್ರತಿದಿನ ಸುಮಾರು ಅರ್ಧ ಘಂಟೆಯಾದರೂ ಪ್ರಾಣಿ 4ಪಕ್ಷಿಗಳ ಹಾಗೂ ಸಸಿ ಮರಗಳ ಜೋತೆಗೆ ಅನೊನ್ಯತೆಯಿಂದ ಕಾಲ ಕಳೆಯಬೇಕು. ಇಂದು ಜಗತ್ತಿನಲ್ಲಿ ಪ್ಲಾಸ್ಟಿಕ ಎಂಬ ಪೆಡಂಭೂತ ಇಡೀ ಸಮಾಜದ ಸ್ವಾಸ್ಥ್ಯವನ್ನ ಹಾಳು ಮಾಡುತ್ತಿದೆ. ಕಾರಣ ನಾವೆಲ್ಲರು ಪ್ಲಾಸ್ಟಿಕ್ ಬಳಕೆಯನ್ನ ತ್ಯಜಿಸಬೇಕು. ಪ್ಲಾಸ್ಟಿಕ್ ನಿಂದ ಅನೇಕ ಪ್ರಾಣಿ ಪಕ್ಷಿಗಳು ತಮ್ಮ ಅಮೂಲ್ಯವಾದ ಜೀವವನ್ನ ಕಳೆದುಕೊಳ್ಳುತ್ತಿವೆ ಎಂದು ಹೇಳಿದರು ಹಾಗೂ ಇಂದಿನಿಂದ ನಾವೆಲ್ಲರು ಪ್ಲಾಸ್ಟಿಕ್ ತ್ಯಜಿಸಿ ಪರಿಸರ ರಕ್ಷೀಸೊಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರ. ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಪ್ರಭಾರಿ ಮುಖ್ಯ ಅಧೀಕ್ಷಕರಾದ ವಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ನಮ್ಮೇಲ್ಲರ ಉತ್ತಮ ಆರೋಗ್ಯದ ಗುಟ್ಟು ಉತ್ತಮವಾದ ಪರಿಸರ. ಪರಿಸರ ಸ್ವಾಸ್ಥೆವಾಗಿದ್ದರೆ ಮಾನವನು, ಪ್ರಾಣಿ ಪಕ್ಷಿಗಳು ಹಾಗೂ ಸಕಲ ಜೀವಿಗಳು ಉತ್ತಮ ಆರೋಗ್ಯ ಹೊಂದಬಹುದು. ಕೇವಲ ಪರಿಸರ ದಿನಾಚರಣೆ ನಿಮಿತ್ಯ ಮಾತ್ರ ಸಸಿ ನೆಟ್ಟರೆ ಸಾಲದು ನಾವು ನೆಟ್ಟಿರುವ ಸಸಿಗಳನ್ನ ಮಗುವಿನಂತೆ ಪೋಷಿಸಿ ಬೆಳೆಸಬೇಕು ಅಂದಾಗ ಮಾತ್ರ ಈ ಕಾರ್ಯಕ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ರಮೇಶ ಗಿರಿಯಪ್ಪನವರ, ಪುಂಡಲೀಕ ಹಾಗೂ ಕಾರಾಗೃಹದ ಆಡಳಿತಾಧೀಕಾರಿಗಳಾದ ಬಿ ಎಸ್ ಪೂಜಾರಿ, ಸಹಾಯಕ ಅಧೀಕ್ಷಕರಾದ ಮಲ್ಲಿಕಾರ್ಜುನ ಕೊಣ್ಣೂರ ಹಾಗೂ ವೈಧ್ಯಾಧಿಕಾರಿಗಳಾದ ಡಾಽಽ ಸಂಜಯ ಡುಮ್ಮಗೊಳ, ಮನೋರೋಗ ತಜ್ಞೆ ಡಾಽಽ ಸರಸ್ವತಿ ತೆನಗಿ ಹಾಗೂ ಜೈಲರ್ ಸಿಬ್ಬಂದಿಯವರು ಉಪಸ್ಥಿತರಿದ್ದರು.