ಮಾಂಜರಿ ಗ್ರಾಮದ ಪುತ್ರ, ಮಾಜಿ ಶಾಸಕರಾದ ಕೆ.ಪಿ. ಮಗೆಣ್ಣವರರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಘೋಷಣೆ

ಮಾಂಜರಿ ಗ್ರಾಮದ ಪುತ್ರ, ಮಾಜಿ ಶಾಸಕರಾದ ಕೆ.ಪಿ. ಮಗೆಣ್ಣವರರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಘೋಷಣೆ ‘Sahakara Ratna’ award announced for K.P. Magennavar, son of Manjari village and former MLA

ಮಾಂಜರಿ  13: ರಾಜ್ಯದಲ್ಲಿ ಸಹಕಾರ ಚಳವಳಿಗೆ ಅಸಾಧಾರಣ ಕೊಡುಗೆ ನೀಡಿರುವ ಗಣ್ಯ ವ್ಯಕ್ತಿಗಳಿಗೆ ಗೌರವಿಸಲು ಕರ್ನಾಟಕ ರಾಜ್ಯ ಸಹಕಾರಿ ಮಹಾಸಂಘ ಲಿಮಿಟೆಡ್, ಬೆಂಗಳೂರು ಸಂಸ್ಥೆಯಿಂದ ಪ್ರತಿ ವರ್ಷ “ಸಹಕಾರ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಈ ವರ್ಷದ ಅತ್ಯಂತ ಪ್ರತಿಷ್ಠಿತವಾದ ಈ ಪ್ರಶಸ್ತಿ ಮಾಂಜರಿ ಗ್ರಾಮದ ಪುತ್ರ, ಮಾಜಿ ಶಾಸಕರಾಗಿರುವ ಮತ್ತು ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕರು ಶ್ರೀ ಕಲ್ಲಪ್ಪಣ್ಣ ಪ. ಮಗೆಣ್ಣವರರಿಗೆ ಘೋಷಣೆಯಾಗಿದೆ.  ಕಲ್ಲಪ್ಪಣ್ಣ ಮಗೆಣ್ಣವರು ಹಲವು ವರ್ಷಗಳಿಂದ ಗ್ರಾಮೀಣ ಭಾಗದ ಸಹಕಾರ ಚಳವಳಿಯನ್ನು ಬಲಪಡಿಸಲು ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ರೈತರು, ಮಹಿಳೆಯರು ಹಾಗೂ ಯುವಕರ ಆರ್ಥಿಕ ಶಕ್ತಿಕರಣಕ್ಕಾಗಿ ಸಹಕಾರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಲು ಅವರು ನಿರಂತರ ಪ್ರಯತ್ನ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ಸ್ಥಾಪಿತವಾದ ಲಕ್ಷ್ಮೀ ಸೌಹಾರ್ದ ಸಹಕಾರಿ ಸಂಸ್ಥೆಯು ಅಲ್ಪಾವಧಿಯಲ್ಲಿ ಶ್ರಮಜೀವಿಗಳ ಬದುಕಿಗೆ ಹೊಸ ಬೆಳಕು ತಂದಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 14ರಂದು, ಶುಕ್ರವಾರ, ಬೆಂಗಳೂರು ನಗರದ ಪ್ಯಾಲೆಸ್ ಗ್ರೌಂಡ್ಸ್‌ನ ಗೇಟ್ ನಂ. 4ರ ಬಳಿಯ ಗಾಯಕತ್ರಿ ವಿಹಾರದಲ್ಲಿ ವೈಭವದಿಂದ ನಡೆಯಲಿದೆ. ಈ ಸಮಾರಂಭಕ್ಕೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾದ ಡಿ.ಕೆ. ಶಿವಕುಮಾರ್, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಅನೇಕ ಸಚಿವರು ಹಾಗೂ ಗಣ್ಯರು ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಕಲ್ಲಪ್ಪಣ್ಣ ಮಗೆಣ್ಣವರರಿಗೆ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅವರ ಈ ಗೌರವದಿಂದ ಮಾಂಜರಿ ಗ್ರಾಮ ಹಾಗೂ ಇಡೀ ಉತ್ತರ ಕರ್ನಾಟಕದ ಜನರಲ್ಲಿ ಹೆಮ್ಮೆ ಉಂಟಾಗಿದೆ. ಗ್ರಾಮಸ್ಥರು ಹಾಗೂ ಅಭಿಮಾನಿಗಳಿಂದ ಶ್ರೀ ಕಲ್ಲಪ್ಪಣ್ಣ ಮಗೆಣ್ಣವರರಿಗೆ ಹಾರ್ದಿಕ ಅಭಿನಂದನೆಗಳು ವ್ಯಕ್ತವಾಗುತ್ತಿವೆ.