ರೋಗ ಮುಕ್ತ ಸಮಾಜಕ್ಕೆ ಯೋಗ ಮುಖ್ಯ: ಜ್ಯೋತಿ ಜಂಬಿಗಿ
Yoga is important for a disease-free society: Jyoti Jambigi
ರೋಗ ಮುಕ್ತ ಸಮಾಜಕ್ಕೆ ಯೋಗ ಮುಖ್ಯ: ಜ್ಯೋತಿ ಜಂಬಿಗಿ
ರಾಣೇಬೆನ್ನೂರು 05: ಇಂದಿನ ಆಧುನಿಕ ಜೀವನ ಶೈಲಿಯ ಬದುಕನ್ನು ಅಳವಡಿಸಿಕೊಂಡಿರುವ ಮಕ್ಕಳಿಗೆ ಮತ್ತು ಅವರ ಶಿಕ್ಷಣ ಪೌಷ್ಟಿಕತೆಯ ಬೆಳವಣಿಗೆಗೆ ನಿತ್ಯ ಯೋಗ ತಾರಕ ಮಂತ್ರವಾಗಿದೆ ಎಂದು ಜಿಲ್ಲಾ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಜ್ಯೋತಿ ಜ.ಜಂಬಿಗಿ ಹೇಳಿದರು. ಅವರು ಗೆಳೆಯರ ಬಳಗದ ಶಾಲೆಯಲ್ಲಿ ಸ್ಪೋರ್ಟ್ಸ ಅಸೋಸಿಯೇಷನ್ ಏರಿ್ಡಸಿದ್ದ, ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಇಂದು ಮಕ್ಕಳಾದಿಯಾಗಿ ಸರಿಯಾದ ರೀತಿಯ ಪೌಷ್ಟಿಕ ಆಹಾರ ಮತ್ತು ಶ್ರಮರಹಿತ ಜೀವನದಿಂದಾಗಿ ಅನೇಕ ಸಮಸ್ಯೆಗಳಿಂದ ಬಳಲುವಂತಾಗಿದ್ದಾರೆ. ಏಕಾಗ್ರತೆ ಮತ್ತು ಆರೋಗ್ಯವಂತ ಬದುಕಿಗೆ ನಿತ್ಯ ಯೋಗ, ಧ್ಯಾನ, ಪ್ರಾಣಾಯಾಮ ಅತ್ಯಂತ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನೂರಾರು ವಿದ್ಯಾರ್ಥಿಗಳು, ತಮ್ಮ ಪ್ರದರ್ಶನ ನೀಡಿ ಯೋಗಾಸಕ್ತರ ಮತ್ತು ಸಾರ್ವಜನಿಕರ ಗಮನ ಸೆಳೆದರು.
ಸಂಸ್ಥೆಯ ಜಿಲ್ಲಾಧ್ಯಕ್ಷ ಶಂಕ್ರಯ್ಯ ಮಠದ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೆಳೆಯರ ಬಳಗ ಪ್ರೌಢಶಾಲಾ ಮುಖ್ಯ ಶಿಕ್ಷಕಿ, ಪುಸ್ಪಾ ಕೆರಳಿ, ಯೋಗಸಾಧಕರಾದ ಆದರ್ಶ ನಾಡಿಗ, ಎನ್. ಎಲ್. ಸುಮಲತಾ, ಮತ್ತಿತರರು ಮುಖ್ಯ ಪರಿಕ್ಷಕರಾಗಿ ತಮ್ಮ ಸೇವೆ ಸಲ್ಲಿಸಿದರು.
ಸಂಸ್ಥೆಯ ಉಪಾಧ್ಯಕ್ಷ ವಿನಾಯಕ ಗಡ್ಡದ,ಪುಷ್ಪಾ ಎಂ. ಸೊಲಭಗೌಡ್, ಆರ್. ಬಿ. ಪಾಟೀಲ,ಯಶವಂತ ಕುಮಾರ ಜಿ. ಕೆ, ಪಾಂಡುರಂಗ ಪೂಜಾರ, ಪುಟ್ಟರಾಜು ಚಂಚಿ ಮೊದಲಾದವರು ನಿರ್ಣಾಯಕರಾಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 