ವಿಶ್ವ ಗ್ಲಾಕೋಮಾ ಸಪ್ತಾಹ..! ಗ್ಲಾಕೋಮಾ ಜಾಗೃತಿಗಾಗಿ ಮಿನಿ ಮ್ಯಾರಥಾನ್ ಆಯೋಜನೆ..!
World Glaucoma Week..! Mini marathon organized for glaucoma awareness..!
ಲೋಕದರ್ಶನ ವರದಿ
ಕಾಗವಾಡ 06 : ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಮಾರ್ಚ ಮೊದಲ ವಾರವನ್ನು ವಿಶ್ವ ಗ್ಲಾಕೋಮಾ ಸಪ್ತಾಹವೆಂದು ಘೋಷಿಸಿದ್ದು, ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ ಮತ್ತು ಭಾರತಿ ವಿದ್ಯಾಪೀಠ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ದಿ.01 ರಂದು ಗ್ಲಾಕೋಮಾ ಸಪ್ತಾಹದ ಅಂಗವಾಗಿ ಗ್ಲಾಕೋಮಾ ಜಾಗೃತಿಗಾಗಿ ಮಿನಿ ಮ್ಯಾರಾಥಾನ ಆಯೋಜಿಸಲಾಗಿತ್ತು.
ಭಾರತಿ ವಿದ್ಯಾಪೀಠದ ಡಿನ್ ಡಾ. ನೀತೀನ ಮುದಿರಾಜ ಮ್ಯಾರಥಾನ್ ಉದ್ಘಾಟಿಸಿದರು. ಸುಮಾರು 300 ಜನ ಭಾಗವಹಿಸಿದ್ದ ಮ್ಯಾರಥಾನ್ವು ಭಾರತಿ ವಿದ್ಯಾಪೀಠದ ವೈದ್ಯಕೀಯ ಕಾಲೇಜಿನಿಂದ ವಾಲಚಂದ ಕಾಲೇಜಿನ ವರೆಗೆ ಸಾಗಿ, ಮರಳಿ ಭಾರತಿ ವಿದ್ಯಾಪೀಠಕ್ಕೆ ಸುಮಾರು 5 ಕೀ.ಮಿಗಳ ವರೆಗೆ ನಡೆಯಿತು.
ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ನ ಅಧ್ಯಕ್ಷ ಡಾ. ಶರದ ಭೋಮಜ ಮ್ಯಾರಾಥಾನ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡುತ್ತ, ಗ್ಲಾಕೋಮಾ ಇದು ಅತ್ಯಂತ ಅಪಾಯಕಾರಿ ಕಣ್ಣಿನ ಕಾಯಿಲೆಯಾಗಿದ್ದು, ನಿಯಮಿತ ಕಣ್ಣಿನ ತಪಾಸಣೆ ಮತ್ತು ತಜ್ಞ ನೇತ್ರ ವೈದ್ಯರ ಸಲಹೆಯೊಂದಿಗೆ ಕಣ್ಣುಗಳ ರಕ್ಷಣೆ ಮಾಡಬಹುದಾಗಿದೆ ಎಂದ ಅವರು, ಕಣ್ಣಿನ ಅನೇಕ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.
ಸಾಂಗಲಿಯ ಹೆಸರಾಂತ ಗ್ಲಾಕೋಮಾ ತಜ್ಞೆ ಡಾ. ಸಂಗೀತಾ ಮಲಾನಿ ಮಾತನಾಡಿ, ಗ್ಲಾಕೋಮಾದ ಅಪಾಯಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ನ ಕಾರ್ಯದರ್ಶಿ ಡಾ. ಅರ್ಚನಾ ಬಿರಾದಾರ, ಖಜಾಂಚಿ ಡಾ. ಅಭಿನಂದನ ಪಾಟೀಲ ಸೇರಿದಂತೆ ಸಾಂಗಲಿ ಜಿಲ್ಲೆಯ ಎಲ್ಲ ಕಣ್ಣಿನ ಆಸ್ಪತ್ರೆಗಳ ಪ್ರತಿನಿಧಿಗಳು ಮತ್ತು ವೈದ್ಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 