ವಿಶ್ವ ಗ್ಲಾಕೋಮಾ ಸಪ್ತಾಹ..! ಗ್ಲಾಕೋಮಾ ಜಾಗೃತಿಗಾಗಿ ಮಿನಿ ಮ್ಯಾರಥಾನ್ ಆಯೋಜನೆ..!
World Glaucoma Week..! Mini marathon organized for glaucoma awareness..!
ಲೋಕದರ್ಶನ ವರದಿ
ಕಾಗವಾಡ 06 : ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಷ ಮಾರ್ಚ ಮೊದಲ ವಾರವನ್ನು ವಿಶ್ವ ಗ್ಲಾಕೋಮಾ ಸಪ್ತಾಹವೆಂದು ಘೋಷಿಸಿದ್ದು, ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ ಮತ್ತು ಭಾರತಿ ವಿದ್ಯಾಪೀಠ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ದಿ.01 ರಂದು ಗ್ಲಾಕೋಮಾ ಸಪ್ತಾಹದ ಅಂಗವಾಗಿ ಗ್ಲಾಕೋಮಾ ಜಾಗೃತಿಗಾಗಿ ಮಿನಿ ಮ್ಯಾರಾಥಾನ ಆಯೋಜಿಸಲಾಗಿತ್ತು.
ಭಾರತಿ ವಿದ್ಯಾಪೀಠದ ಡಿನ್ ಡಾ. ನೀತೀನ ಮುದಿರಾಜ ಮ್ಯಾರಥಾನ್ ಉದ್ಘಾಟಿಸಿದರು. ಸುಮಾರು 300 ಜನ ಭಾಗವಹಿಸಿದ್ದ ಮ್ಯಾರಥಾನ್ವು ಭಾರತಿ ವಿದ್ಯಾಪೀಠದ ವೈದ್ಯಕೀಯ ಕಾಲೇಜಿನಿಂದ ವಾಲಚಂದ ಕಾಲೇಜಿನ ವರೆಗೆ ಸಾಗಿ, ಮರಳಿ ಭಾರತಿ ವಿದ್ಯಾಪೀಠಕ್ಕೆ ಸುಮಾರು 5 ಕೀ.ಮಿಗಳ ವರೆಗೆ ನಡೆಯಿತು.
ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ನ ಅಧ್ಯಕ್ಷ ಡಾ. ಶರದ ಭೋಮಜ ಮ್ಯಾರಾಥಾನ ವಿಜೇತರಿಗೆ ಬಹುಮಾನ ವಿತರಿಸಿ, ಮಾತನಾಡುತ್ತ, ಗ್ಲಾಕೋಮಾ ಇದು ಅತ್ಯಂತ ಅಪಾಯಕಾರಿ ಕಣ್ಣಿನ ಕಾಯಿಲೆಯಾಗಿದ್ದು, ನಿಯಮಿತ ಕಣ್ಣಿನ ತಪಾಸಣೆ ಮತ್ತು ತಜ್ಞ ನೇತ್ರ ವೈದ್ಯರ ಸಲಹೆಯೊಂದಿಗೆ ಕಣ್ಣುಗಳ ರಕ್ಷಣೆ ಮಾಡಬಹುದಾಗಿದೆ ಎಂದ ಅವರು, ಕಣ್ಣಿನ ಅನೇಕ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.
ಸಾಂಗಲಿಯ ಹೆಸರಾಂತ ಗ್ಲಾಕೋಮಾ ತಜ್ಞೆ ಡಾ. ಸಂಗೀತಾ ಮಲಾನಿ ಮಾತನಾಡಿ, ಗ್ಲಾಕೋಮಾದ ಅಪಾಯಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ವಿವರಿಸಿದರು. ಈ ವೇಳೆ ಸಾಂಗಲಿ ಆಪ್ಥಾಲ್ಮೋಲಾಜಿಸ್ಟ್ ಸೊಸಿಯಲ್ ಅಸೋಶಿಯೇಶನ್ನ ಕಾರ್ಯದರ್ಶಿ ಡಾ. ಅರ್ಚನಾ ಬಿರಾದಾರ, ಖಜಾಂಚಿ ಡಾ. ಅಭಿನಂದನ ಪಾಟೀಲ ಸೇರಿದಂತೆ ಸಾಂಗಲಿ ಜಿಲ್ಲೆಯ ಎಲ್ಲ ಕಣ್ಣಿನ ಆಸ್ಪತ್ರೆಗಳ ಪ್ರತಿನಿಧಿಗಳು ಮತ್ತು ವೈದ್ಯರು ಉಪಸ್ಥಿತರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 