ಜಲ, ನೆಲ, ಮಳೆ, ಕೊಯ್ಲು: ರೈತರಿಗೆ ಪಾಠಶಾಲೆ

ಜಲ, ನೆಲ, ಮಳೆ, ಕೊಯ್ಲು: ರೈತರಿಗೆ ಪಾಠಶಾಲೆ Water, soil, rain, harvest: A lesson for farmers

ಜಲ, ನೆಲ, ಮಳೆ, ಕೊಯ್ಲು: ರೈತರಿಗೆ ಪಾಠಶಾಲೆ 

ನೇಸರಗಿ 05: ಸಮೀಪದ  ವನ್ನೂರ  ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ  ಯೋಜನೆ ವತಿಯಿಂದ  ನೆಲಜಲ ಸಂರಕ್ಷಣೆ, ಮಳೆ ಕೊಯ್ಲು ವಿಷಯದ ಅಡಿಯಲ್ಲಿ ರೈತ ಕ್ಷೇತ್ರ ಪಾಠ ಶಾಲೆಯನ್ನು ಹಮ್ಮಿಕೊಳ್ಳಲಾಯಿತು.  

 ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಬಸನಗೌಡ ಪಾಟೀಲ ಮಾತನಾಡಿ ಜಲ ನೆಲ, ಸಂರಕ್ಷಣೆ, ಮಳೆ ಕೊಯ್ಲು ರೈತರಿಗೆ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು. ಊರಿನ ಮುಖಂಡರಾದ ಮಲ್ಲಪ್ಪ ಬಾಳಸಾಹೇಬ ದೇಸಾಯಿ ಅವರು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಪಂಚಾಯತ ಸದಸ್ಯರಾದ ಹನುಮಂತ ಅವರು ರೈತರು ಸ್ವಾವಲಂಬಿ ಜೀವನವನ್ನು ನಡೆಸಬೇಕೆಂದು ಎಂದರು. ವಲಯದ ಮೇಲ್ವಿಚಾರಕರು, ಊರಿನ ಗಣ್ಯರು,ರೈತ ಬಾಂಧವರು ಉಪಸ್ಥಿತರಿದ್ದರು. ತಾಲೂಕಿನ ಕೃಷಿ ಮೇಲ್ವಿಚಾರಕರು ನಿರೂಪಣೆ ಮಾಡಿದರು. ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯವರು ಸ್ವಾಗತಿಸಿದರು.