ಉಮ್ಮೀದ್ ಪೋಟ್ರ್ಲ್ನಲ್ಲಿ ವಕ್ಫ್ ಆಸ್ತಿ ನೊಂದಣಿ : ಅಧಿಕಾರಿಗಳಿಗೆ ಸನ್ಮಾನ
Waqf property registration on Umaid portal: Officials felicitated
ವಿಜಯಪುರ.ಡಿ.14 : ವಕ್ಫ್ ಆಸ್ತಿಗಳ ಸಂರಕ್ಷಣೆ-ರಕ್ಷಣೆಗಾಗಿ ಕೇಂದ್ರ ಸರ್ಕಾರ ರಚನೆ ಮಾಡಿರುವ ಉಮ್ಮೀದ ಪೋರ್ಟಲ್ನಲ್ಲಿ ಜಿಲ್ಲೆಯ ವಕ್ಫ್ ಆಸ್ತಿಗಳ ನೊಂದಣಿ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ನಿಗದಿತ ಅವಧಿಯಲ್ಲಿ ನಿರ್ವಹಿಸಿರುವುದಕ್ಕೆ ಜಿಲ್ಲೆಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯ ವಿವಿಧ ಮುಖಂಡರು ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಉಮ್ಮೀದ್ ಪೋಟ್ರ್ಲ್ನಲ್ಲಿ ವಕ್ಫ್ ಆಸ್ತಿಗಳ ನೊಂದಣಿ ಕಾರ್ಯವನ್ನು ನಿರ್ವಹಿಸಿದ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳಾದ ತಬಸ್ಸುಮ್ ಎಂ., ನಜ್ಮಾ ಮೊಕಾಶಿ, ಮೊಹ್ಮದ ಜುಬೇರ ಇನಾಂದಾರ, ರಾಜ್ಅಹಮದ್ ಸಂಗಾಪುರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಲ್ತಾಫ್ ಲಕ್ಕುಂಡಿ, ಸದಸ್ಯರುಗಳಾದ ಸೈಯ್ಯದ ಇಮ್ರಾನ್ ಜಾಗೀರದಾರ, ಅಬ್ದುಲ್ ಸಮದ್ ಸುತಾರ, ಸಾಮಾಜಿಕ ಕಾರ್ಯಕರ್ತ ನಿಜಾಮುದ್ದೀನ್ ಹಿರಿಯಾಳ, ಅಬ್ದುಲರಜಾಕ ಮೇಟಿ, ಉಮರ್ ಫಾರೂಖ ಬಾಂಗಿ, ತೌಸೀಫ್ ಇನಾಮದಾರ, ಸಿಕಂದರ್ಸಾಬ ಸಾವಳಗಿ, ಮುರ್ತೂಜಸಾಬ್ ನದಾಫ್, ಮೊಹ್ಮದ ಸಮಿ ಗುನುವನ, ರಾಜಅಹ್ಮದ್ ಬಗಲಿ ಸೇರಿದಂತೆ ಇತರರು ಉಪಸ್ತಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 