ವಿಜಯಪುರ: ಕಾರ್ಗಿಲ್ ವಿಜಯ ನಮನ ಕಾರ್ಯಕ್ರಮ
ಲೋಕದರ್ಶನ ವರದಿ
ವಿಜಯಪುರ 25: ನಗರದ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ದೇಶ ರಕ್ಷಕರ ಪಡೆ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ ನಮನ ಸಪ್ತಾಹ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾಣಿಕ್ಯ ಕರಿಯರ ಅಕಾಡಮಿಯ ಲೋಹಿತ ಮೆತ್ರಿ ಮಾತನಾಡಿ, ಅನೇಕ ಜನ ಮಹಾನ ನಾಯಕರು ಹೋರಾಟಗಾರರು ರಾಜರು ಸನ್ಯಾಸಿಗಳು ಜನಸಿದ ನಮ್ಮ ನಾಡು. ನಮ್ಮ ಮೊದಲ ತಾಯಿ ಅಂದರೆ ಅದು ನಮ್ಮ ಭಾರತಾಂಬೆ. ಆ ತಾಯಿಯ ಮಕ್ಕಳಾದ ನಮ್ಮೆಲ್ಲರ ಮೊದಲ ಕರ್ತವ್ಯ ವೆಂದರೆ ದೇಶ ರಕ್ಷಣೆ ಮಾಡುವುದು ಎಂದರು.
ಡಿ.ವಿ. ಕೋಟಿ ಗುರುಗಳು ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಸೇರಬೇಕು ಕರೆ ಎಂದರು. ಮಾಜಿ ಯೋಧರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ದೇಶ ರಕ್ಷಕರ ಪಡೆ ಸಂಘಟನೆ ಶ್ಲಾಘನೀಯ. ಭಾರತ ಮಾತೆ ಈ ಸಂಘಟಕರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ದೇಶಭಕ್ತಿ ಕಾರ್ಯಕ್ರಮ ಮಾಡಲಿ ಎಮದು ಆಶಿಸಿದರು.
ಸಂಘಟನೆಯ ಮುಖಂಡರಾದ ರೋಹನ ಆಪ್ಟೆ, ಚನ್ನುಗೌಡಾ ಪಾಟೀಲ, ರಾಘವೇಂದ್ರ ಮಿರೇಕರ, ಆದಿತ್ಯ ತಾವರಗೇರಿ, ಪ್ರೇಮ ಕಳಕೂಟಗಿ, ವಿವೇಕ ತಾವರಗೇರಿ, ವಿಕ್ರಮ ತಾಂಬೇಕಾರ, ಅಜಯ ಸೂರ್ಯವಂಶಿ ಇದ್ದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 