ವಿಜಯಪುರ: ಕಾರ್ಗಿಲ್ ವಿಜಯ ನಮನ ಕಾರ್ಯಕ್ರಮ
ಲೋಕದರ್ಶನ ವರದಿ
ವಿಜಯಪುರ 25: ನಗರದ ಎ.ಎಸ್.ಪಿ ವಾಣಿಜ್ಯ ಮಹಾವಿದ್ಯಾಲಯ ಮತ್ತು ದೇಶ ರಕ್ಷಕರ ಪಡೆ ಸಹಯೋಗದೊಂದಿಗೆ ಕಾರ್ಗಿಲ್ ವಿಜಯ ನಮನ ಸಪ್ತಾಹ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾಣಿಕ್ಯ ಕರಿಯರ ಅಕಾಡಮಿಯ ಲೋಹಿತ ಮೆತ್ರಿ ಮಾತನಾಡಿ, ಅನೇಕ ಜನ ಮಹಾನ ನಾಯಕರು ಹೋರಾಟಗಾರರು ರಾಜರು ಸನ್ಯಾಸಿಗಳು ಜನಸಿದ ನಮ್ಮ ನಾಡು. ನಮ್ಮ ಮೊದಲ ತಾಯಿ ಅಂದರೆ ಅದು ನಮ್ಮ ಭಾರತಾಂಬೆ. ಆ ತಾಯಿಯ ಮಕ್ಕಳಾದ ನಮ್ಮೆಲ್ಲರ ಮೊದಲ ಕರ್ತವ್ಯ ವೆಂದರೆ ದೇಶ ರಕ್ಷಣೆ ಮಾಡುವುದು ಎಂದರು.
ಡಿ.ವಿ. ಕೋಟಿ ಗುರುಗಳು ಮಾತನಾಡಿ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯದಲ್ಲಿ ಸೇರಬೇಕು ಕರೆ ಎಂದರು. ಮಾಜಿ ಯೋಧರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡ ದೇಶ ರಕ್ಷಕರ ಪಡೆ ಸಂಘಟನೆ ಶ್ಲಾಘನೀಯ. ಭಾರತ ಮಾತೆ ಈ ಸಂಘಟಕರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ದೇಶಭಕ್ತಿ ಕಾರ್ಯಕ್ರಮ ಮಾಡಲಿ ಎಮದು ಆಶಿಸಿದರು.
ಸಂಘಟನೆಯ ಮುಖಂಡರಾದ ರೋಹನ ಆಪ್ಟೆ, ಚನ್ನುಗೌಡಾ ಪಾಟೀಲ, ರಾಘವೇಂದ್ರ ಮಿರೇಕರ, ಆದಿತ್ಯ ತಾವರಗೇರಿ, ಪ್ರೇಮ ಕಳಕೂಟಗಿ, ವಿವೇಕ ತಾವರಗೇರಿ, ವಿಕ್ರಮ ತಾಂಬೇಕಾರ, ಅಜಯ ಸೂರ್ಯವಂಶಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 