ಕಲಘಟಗಿಯಲ್ಲಿ ವಾಹನಗಳ ಬ್ಯಾಟರಿ ಕಳ್ಳರ ಬಂಧನ
Vehicle battery thieves arrested in Kalaghatagi
ಕಲಘಟಗಿಯಲ್ಲಿ ವಾಹನಗಳ ಬ್ಯಾಟರಿ ಕಳ್ಳರ ಬಂಧನ
ಧಾರವಾಡ ಅ.31: ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆ ಗುನ್ನಾ ನಂ 249/2025 ಕಲಂ 303(2) ಬಿ.ಎನ್.ಎಸ್.ಎಸ್ 2023 ನೇದ್ದರ ಪ್ರಕರಣದಲ್ಲಿ ಅಗಸ್ಟ್ 30, 2025 ರಂದು ರಾತ್ರಿ 10 ಗಂಟೆಯಿಂದ ಅಗಸ್ಟ್ 31, 2025 ರಂದು ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಹತ್ತಿರ ಪಾರ್ಕಿಂಗ್ ಮಾಡಿ ನಿಲ್ಲಿಸಿದ ಲಾರಿಗಳಲ್ಲಿ ಒಟ್ಟು 04 ಬ್ಯಾಟರಿಗಳನ್ನು ಹಾಗು ಅಕ್ಟೋಬರ್ 25,2025 ರಂದು ರಾತ್ರಿ 10 ಗಂಟೆಯಿಂದ ಅಕ್ಟೋಬರ್ 26, 2025 ರಂದು ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿಯ ಮನೆಯ ಹತ್ತಿರ ಪಾರ್ಕಿಂಗ್ ಮಾಡಿ ನಿಲ್ಲಿಸಿದ ಲಾರಿಗಳಲ್ಲಿ ಒಟ್ಟು 03 ಬ್ಯಾಟರಿಗಳು ಒಟ್ಟು ಸೇರಿ 07 ಬ್ಯಾಟರಿಗಳು ಒಂದು ಬ್ಯಾಟರಿಗೆ 10,000 ರೂ ಗಳಂತೆ ಒಟ್ಟು 07 ಬ್ಯಾಟರಿಗಳ ಅ.ಕಿ 70,000 ರೂ ಕಿಮ್ಮತ್ತಿನ ಬ್ಯಾಟರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿ ಕೊಂಡು, ಈ ಬಗ್ಗೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಪಿ.ಐ ಕಲಘಟಗಿ ಪೊಲೀಸ್ ಠಾಣೆ, ಸಿ.ಎನ್ಕರ ವಿರ್ಪನವರ, ಪಿ.ಎಸ್.ಐ ಅಪರಾಧ ವಿಭಾಗ ಹಾಗು ಠಾಣೆಯ ಸಿಬ್ಬಂದಿ ಜನರು ಕೂಡಿಕೊಂಡು 03 ಜನ ಆಪಾದಿತರಿಗೆ ಪತ್ತೆ ಮಾಡಿ ಆಪಾದಿತರ ತಾಬಾದಿಂದ ಎರಡು ಲಕ್ಷದ ಮೂವತೈದು ಸಾವಿರ ರೂಪಾಯಿಗಳು (2,35,000) ಕಿಮ್ಮತ್ತಿನ ಒಟ್ಟು 25 ವಾಹನ ಬ್ಯಾಟರಿಗಳು ಹಾಗು ಒಂದು ಲಕ್ಷದ ತೊಂಬತೈದು ಸಾವಿರ ರೂಪಾಯಿಗಳು (1,95000) ಕಿಮ್ಮತ್ತಿನ 02 ಮೊಟರ್ ಸೈಕಲ್ಗಳು ಒಟ್ಟು ನಾಲ್ಕು ಲಕ್ಷದ ಮೂವತೈದು ಸಾವಿರ (4,35,000) ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದು ಅದೆ.
ಸದರಿ ಪ್ರಕರಣ ದಾಖಲಾದ ಆರೋಪಿತರನ್ನು ಬಂಧಿಸುವಲ್ಲಿ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ, ಹೆಚ್ಚವರಿ ಪೊಲೀಸ್ ಅಧೀಕ್ಷಕ(ಪ್ರಭಾರ) ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪವಿಭಾಗ ಪೊಲೀಸ್ ಉಪಾಧೀಕ್ಷಕ ವಿನೋದ.ಎಮ್.ಮುಕ್ತಿದಾರ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಪಿ.ಐ ಶ್ರೀಶೈಲ ಕೌಜಲಗಿ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡತಂಡ ಆರೋಪತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು ಇರುತ್ತದೆ. ಸದರಿ ಪತ್ತೆ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 