ವೀರಭದ್ರ ದೇವಸ್ಥಾನ, ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಕಾತರ್ಿಕ ದೀಪೋತ್ಸವ
ಮಾಂಜರಿ 10: ಕಾತರ್ಿಕ ದೀಪೋತ್ಸವ ನಮ್ಮ ಮನಸ್ಸಿನ ಅಂತರಂಗದ ಹಾಗೂ ಬಹಿರಂಗದ ಮನಸ್ಸನ್ನು ಸದೃಢಗೊಳಿಸುತ್ತದೆ. ಅಂತರಂಗದ ಆಚಾರವೆಂಬ ಎಣ್ಣೆ, ಜ್ಞಾನವೆಂಬ ಭಕ್ತಿ ಅರಿವು ಎಂಬ ಜ್ಯೋತಿಯ ಹಣತೆ ಉರಿಯುತ್ತಿರಲು, ಒಳಗೂ ಬೆಳಕು ಹೊರಗು ಬೆಳಕು. ಇದು ಕಾತರ್ಿಕ ಮಾಸದ ಹೊನಲು ಎಂದು ಶ್ರೀಶೈಲ ಜಗದ್ಗುರುಗಳು ಹಾಗೂ ಯಡೂರಿನ ಕಾಡಸಿದ್ಧೇಶ್ವರ ಮತ್ತು ವೀರಭದ್ರ ಸಂಸ್ಥಾನ ಮಠದ ಧಮರ್ಾಧಿಕಾರಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಕಾತರ್ಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕತ್ತಲು ನಮ್ಮೊಳಗಿದೆ, ದೀಪವು ನಮ್ಮೊಳಗಿದೆ. ದೀಪವನ್ನು ಕತ್ತಲು ಆವರಿಸಿದೆ. ದೀಪವು ಕತ್ತಲನ್ನು ತೊಲಗಿಸಿ ನಮ್ಮೊಳಗಿರುವ ಜ್ಞಾನದ ಜ್ಯೋತಿ ಬೆಳಗೋಣ ಹಣತೆ ಹೆಚ್ಚಿದರೆ ಹೊರಗಿನ ಕತ್ತಲು ದೂರವಾಗುತ್ತದೆ. ಒಳಗಿನ ಹಣತೆ ಹಚ್ಚಿದರೆ ಮಾಯೆ ಎಂಬ ಕತ್ತಲು ದೂರವಾಗುತ್ತದೆ. ಮನೆಗಳಲ್ಲಿರುವ ದೀಪವನ್ನು ಬೆಳಗುವುದರ ಜೊತೆಗೆ ಮನದಲ್ಲಿರುವ ದೀಪಗಳನ್ನು ಬೆಳಗಬೇಕು ಎಂದರು.
ರಾಜಶೇಖರ ಹೆಬ್ಬಾರ, ಮಲ್ಲಯ್ಯಾ ಜಡೆ, ಅಡವಯ್ಯಾ ಅರಳಿಕಟ್ಟಮಠ, ಮಲ್ಲಪ್ಪಾ ಸಿಂದೂರ, ಮಂಜುನಾಥ ದೇವರು, ವಿಶ್ವನಾಥ ದೇವರು, ಮತ್ತಯ್ಯಾ ಮಠದ, ಬಾಳಗೌಡಾ ಪಾಟೀಲ, ಪಾಠಶಾಲೆಯ ಗುರುಗಳು, ವಿದ್ಯಾಥರ್ಿಗಳು ಹಾಗೂ ಭಕ್ತರು ಹಾಜರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 