ವೈದ್ಯ ವಿಭೂಷಣ ಪ್ರಶಸ್ತಿ ಪುರಸ್ಕೃತ ಡಿಎಚ್ಒ ಡಾ. ಎಸ್ಎಸ್ ನೀಲಗುಂದ ರವರಿಗೆ ಸನ್ಮಾನ
ಗದಗ 05 : ದಕ್ಷತೆ ಮತ್ತು ಪ್ರಮಾಣಿಕತೆಗೆ ಹೆಸರಾದ ಮತ್ತು ಕೋವಿಡ್ 19ದಲ್ಲಿ ಗದಗ ತಾಲೂಕಿನ ಜನತೆಗೆ ಕೋವಿಡ್ ಬಗ್ಗೆ ಉತ್ತಮ ಸಲಹೆಗಳನ್ನು ನೀಡಿ ಕೋವಿಡ್ ಭಯ ಹೋಗಲಾಡಿಸಿ ನಿವಾರಣೆ ಮಾಡಿದ ಆರೋಗ್ಯ ಇಲಾಖೆಯ ನೌಕರರನ್ನು ಸಾರ್ವಜನಿಕರಿಗೆ ಒಳ್ಳೆಯ ಆರೋಗ್ಯ ಸೇವೆ ನೀಡುವಲ್ಲಿ ಪ್ರೋತ್ಸಾಹಿಸಿ ಮಾರ್ಗ ನೀಡಿ ಗದಗ ತಾಲೂಕಿನ ಜನತೆಗೆ ಒಳ್ಳೆಯ ಆರೋಗ್ಯ ಇಲಾಖೆಯ ಸೇವೆಗಳನ್ನ ಸಮರ್ಕವಾಗಿ ತಲುಪಿಸಿ ಸಾರ್ವಜನಿಕರಿಂದ ಪ್ರಶಂಸೆಯ ಪಾತ್ರರಾದ ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್ ಎಸ್ ನೀಲಗುಂದ ರವರಿಗೆ ವೈದ್ಯವಿಭೂಷಣ ಪ್ರಶಸ್ತಿ ದೊರತಿರುವುದು ನಮಗೆಲ್ಲ ಸಂತಸವನ್ನೂಂಟು ಮಾಡಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗದಗ ಜಿಲ್ಲಾ ಕಾರ್ಯಾಧ್ಯಕ್ಷರಾದ ಸಿದ್ದಪ್ಪ ಎನ್ ಲಿಂಗದಾಳ ಹೇಳಿದರು.ಅವರು ಕರ್ನಾಟಕ ರಾಜ್ಯ ಆರೋಗ್ಯ ನೀರೀಕ್ಷಣಾಧಿಕಾರಿಗಳ ಸಂಘದಿಂದ ವೈದ್ಯವಿಭೂಷಣ ಪ್ರಶಸ್ತಿ ಪುರಸ್ಕೃತ ಡಿ.ಎಚ್.ಒ ಡಾ.ಎಸ್ ಎಸ್ ನೀಲಗುಂದ ರವರ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿ ಅವರಿಗೆ ಮುಂದಿನ ದಿನಮಾನಗಳಲ್ಲಿ ಅತ್ಯುನ್ನತವಾದ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳು ದೊರೆಯಿಲೆಂದು ಹಾರೈಸಿ ಶುಭ ಕೋರಿದರುಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕರಿಗಳಾದ ಡಾ.ಎಸ್.ಎಸ್.ನೀಲಗುಂದ ರವರು ಮಾತನಾಡಿ ಸಾರ್ವಾಜನಿಕರಿಗೆ ಆರೋಗ್ಯ ಇಲಾಖೆಯ ಸೇವೆಯನ್ನು ನೀಡುವಲ್ಲಿ ಇಲಾಖೆಯ ಎಲ್ಲ ನೌಕರರು ಅಧಿಕಾರಿಗಳು ಉತ್ತಮ ಕಾರ್ಯವನ್ನು ಮಾಡಿರಿ ಮತ್ತು ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿ ಗದಗ ಜಿಲ್ಲೆಯ ಗೌರವವನ್ನು ಹೆಚ್ಚಿಸಿರಿ ಎಂದು ಹೇಳಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಮುಂಡರಗಿ ರಾಜ್ಯ ಪರಿಷತ್ ಸದಸ್ಯರಾದ ಮಲ್ಲಿಕಾರ್ಜುನ್ ಎಫ್ ಕಲಕಂಬಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ನಿರ್ದೇಶಕರಾದ ಅಜಯ್ ಕುಮಾರ್ ಕಲಾಲ ರವರು ಡಿಎಚ್.ಒ ಡಾ.ಎಸ್.ಎಸ್.ನೀಲಗುಂದ ರವರಿಗೆ ಸನ್ಮಾನಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಆರೋಗ್ಯ ನೀರೀಕ್ಷಣಾಧಿಕಾರಿ ಸಂಘದ ಗದಗ ಅಧ್ಯಕ್ಷರಾದ ಬಿ ಸಿ ಹಿರೇಹಾಳ ಜಿಲ್ಲಾ ಕಾರ್ಯದರ್ಶಿಗಳಾದ ಕೆ.ವಿ ಬಡಿಗೇರ್ ಕೃಷ್ಣಾ ಗಾಡರಡ್ಡಿ ಪ್ರಭು ಹೊನುಗುಡಿ ಎಂ ಎಚ್ ಕದಂಪುರ ವೈ ಎನ್ ಕಡೆಮನಿ ಎಸ್ಎಲ್ ಕೋರಿ ಗೂಡುನಾಯ್ಕರ್ ಎಸ್.ಎಸ್.ಕುಬಸದ ದೇವರಮನಿ ಇದ್ದರು