ಗಂಗಾವತಿಯಲ್ಲಿ ಉರ್ದು ಕವಿ ಗೋಷ್ಠಿ ಹಾಗೂ ಮುಷಾಯಿರಾ ಕಾರ್ಯಕ್ರಮ
ಕೊಪ್ಪಳ 23 : ಜಿಲ್ಲೆಯ ಗಂಗಾವತಿ ನಗರದ ಖಾದ್ರಿಯ ಫಂಕ್ಷನ್ ಹಾಲ್ ದಲ್ಲಿ ಇದೆ ದಿ 20 ರಂದು ಸೋಮವಾರ ಸಂಜೆ ಕರ್ನಾಟಕ ರಾಜ್ಯ ಉರ್ದು ಅಕಾಡೆಮಿ ಹಾಗೂ ಖಾದ್ರಿಯ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಗಂಗಾವತಿ ಇವುಗಳ ಸಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಉರ್ದು ಕವಿಗೋಷ್ಠಿ ಹಾಗೂ ಬೃಹತ್ ಮೋಶಾಯಿರಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು,ರಾಷ್ಟ್ರೀಯ ಭಾವೈಕ್ಯತೆ ಪರಸ್ಪರ ಸೌಹಾರ್ದತೆ ಯುತ ವಾತಾವರಣ ನಿರ್ಮಾಣ ವಾಗಲು ಮತ್ತು ಯುವಕರಲ್ಲಿ ದೇಶಾಭಿಮಾನ ಬೆಳೆಸಲು ಮತ್ತು ಅದನ್ನು ಉಳಿಸಿ ಬೆಳೆಸಿಕೊಂಡು ಜೀವನ ಸಾಗಿಸಲು ಈ ಉರ್ದು ಕವಿಗೋಷ್ಠಿ ಮತ್ತು ಮುಷಾಯಿರ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು, ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷರಾದ ಮೌಲಾನ ಮುಫ್ತಿ ಮಹಮ್ಮದ್ ಅಲಿ ಖಾಜಿ ರವರು ವಹಿಸಿದ್ದರು, ಗಂಗಾವತಿಯ ಕಲ್ಮಠದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು ಹಾಗೂ ಹೈದರಾಬಾದಿನ ಹಜರತ್ ಸೈಯದ್ ಶಾ ಅಹಮದ್ ಪಾಷಾ ಖಾದ್ರಿ ರವರು ಸಹ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಖಾಜಿ ಕಮರುದ್ದೀನ್ ಕಮರ್ ವಿಜಯಪುರನ ಸೈಯದ್ ಸಾಧಿಕ ಅನವಾರ, ಸೈಯದ್ ಅಮೀನ್ ಶಾ ಖಾದ್ರಿ , ಹಾಫೀಸ್ ಮೊಹಮ್ಮದ್ ರುಕುನುದ್ದೀನ್, ಮೌಲಾನ ಸೈಯದ್ ಅತಿಖುರ್ ರಹಮಾನ್ ಕೊಪ್ಪಳದ ಉರ್ದು ಸಾಹಿತಿ ಕವಿ ಮೊಹಮ್ಮದ್ ಅನ್ವರ್ ಹುಸೇನ್ ಫರೀದಾ ಅಫ್ತರ್ ಶಾಹಿನ ಕೌಸರ್ ಸೈಯದ್ ಮುಕ್ತಾರ್ ಮೌಲ್ವಿ ಮೊಹಮ್ಮದ್ ಮುಜೀಬ್ ಸಾಹೇಬ್ ಅನೇಕರು ತಮ್ಮ ಕವನ ವಾಚನ ಮಾಡಿದರು ಕೊಪ್ಪಳದ ಬದಿಯುದ್ದೀನ್ ಅಹಮದ್ ನವೀದ, ಬೆಳಗಾವಿಯ ಅಹಮದ್ ಶರೀಫ್ ಕಾರ್ಯಕ್ರಮದ ಸಂಚಾಲಕರಾಗಿ ನಿರೂಪಣೆ ಮಾಡಿ ಜನಮನ ರಂಜಿಸಿದರು ಈ ಎಲ್ಲಾ ಕಾರ್ಯಕ್ರಮದ ನೇತೃತ್ವವನ್ನು ಮುಸ್ಲಿಂ ಧರ್ಮಗುರು ಮೊಹಮ್ಮದ್ ಮುಸ್ತಫಾ ಪಾಷಾ ಕಮಾಲ್ ಕಿಲ್ಲೆದಾರ್ ಖಾದ್ರಿ ವ ತಸ್ಕಿನಿ ವಹಿಸಿದ್ದರು, ಒಟ್ಟಾರೆ ಉರ್ದು ಕವಿಗೋಷ್ಠಿ ಮುಷಾಯಿರ ಕಾರ್ಯಕ್ರಮ ಯಶಸ್ವಿಯಾಗಿ ಜನ ಮನರಂಜಿಸಿತು