ಅಕಾಲಿಕ ಮಳೆ ಮೆಣಸಿನ ಕಾಯಿ ತಂದ ರೈತರಿಗೆ ಆತಂಕ
Untimely rain brings panic to farmers who have brought chillies
ಬ್ಯಾಡಗಿ 26 : ಪಟ್ಟಣವು ಒಣ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಿದ್ಧವಾಗಿದ್ದು ರೈತರು ನಾಳೆ ಗುರುವಾರ ಮಾರುಕಟ್ಟೆ ಇರುವುದರಿಂದ ವ್ಯಾಪಾರಕ್ಕಾಗಿ ತುಂಬಿಕೊಂಡು ಬರುತ್ತಿದ್ದು ಬುಧವಾರ ಸಂಜೆ ಮಳೆರಾಯ ಕಾಟ ನೀಡುತ್ತಿದ್ದಾನೆ.ಕಳೆದ ಎರಡು ದಿನಗಳಿಂದ ವಾತಾವರಣ ಏರುಪೇರಾಗಿದ್ದು ಅಲ್ಲಲ್ಲಿ ಆಕಾಲಿಕ ತುಂತುರು ಮಳೆಯು ಸುರಿಯುವ ಸಂಭವಿದ್ದು ರೈತರ ಮೆಣಸಿನಕಾಯಿ ವ್ಯಾಪಾರಕ್ಕೆ ತೊಂದರೆಯಾಗುವ ಸಾಧ್ಯವಿದೆ ಮೋಡ ಕವಿದ ವಾತಾವರಣ ಮೆಣಸಿನಕಾಯಿ ನಾಳಿನ ವ್ಯಾಪಾರಕ್ಕೆ ಅಡ್ಡಿಪಡಿಸಬಹುದಾಗಿದೆ. ವ್ಯಾಪಾರಕ್ಕಾಗಿ ಇಟ್ಟ ಒಣಮೆಣಸಿನಕಾಯಿ ಇದೇ ತರಹ ತುಂತುರು ಮಳೆ ಬಂದರೆ ದರದಲ್ಲಿ ಕಡಿಮೆ ಆಗುವ ಸಾಧ್ಯತೆ ಇದೆ ರೈತರು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಬಿಸಿಲಿನ ತಾಪಮಾನದಿಂದ ಲಕ್ಷಕ್ಕೂ ಅಧಿಕ ಒಣ ಮೆಣಸಿನಕಾಯಿ ಚೀಲಗಳು ಮಾರುಕಟ್ಟೆಗೆ ಬರುತ್ತಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ರೈತರಿಗೆ ಉತ್ತಮ ದರ ಸಿಗುತ್ತಿದ್ದು ಸದ್ಯ ಅಕಾಲಿಕ ಮಳೆ ಬರುವುದರಿಂದ ರೈತನ ಮೆಣಸಿನಕಾಯಿ ದರ ಕಡಿಮೆ ಆಗಬಹುದು ಹಾಗಾಗಿ ಅಂಗಡಿಯ ಮಾಲೀಕರು ಕಣದ ತುಂಬೆಲ್ಲ ಮೆಣಸಿನಕಾಯಿ ಚೀಲಗಳಿಗೆ ಪ್ಲಾಸ್ಟಿಕ್ ತಾಡಪಲ್ಲು ಹೊದಿಚಿ ನೀರು ಸಿಡಿಯದ ಹಾಗೆ ಕವರ್ ಮಾಡಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 