ಟು ವ್ಹಿಲರ ಮೆಕ್ಯಾನಿಕಲ್ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೊತ್ಸವ
Two Wheeler Mechanical Welfare Development Association's Anniversary Celebration
ಜಮಖಂಡಿ 12: ಮನುಷ್ಯನ ಆರೋಗ್ಯ ತಪ್ಪಿದಾಗ ಹೇಗೆ ವೈದ್ಯರು ಸರಿ ಪಡಿಸುತ್ತಾರೋ ಹಾಗೆ ಮೆಕ್ಯಾನಿಕ್ಗಳು ವಾಹನಗಳನ್ನು ಸರಿಪಡಿಸಿ, ಸುವ್ಯವಸ್ಥೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ನಗರದ ಬಸವಭವನದಲ್ಲಿ ನಡೆದ ಟು ವ್ಹಿಲರ ಮೆಕ್ಯಾನಿಕಲ್ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವಾರ್ಷಿಕೊತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು. ಪ್ರತಿಯೊಬ್ಬರು ವಾಹನ ಹೊಂದಿದ್ದಾರೆ ಆದ್ದರಿಂದ ಮೆಕ್ಯಾನಿಕ್ಗಳು ಅವಶ್ಯವಾಗಿಬೇಕು, ಸಮಾಜಕ್ಕೆ ನಿಮ್ಮ ಸೇವೆ ಅತ್ಯಂತ ಉಪಯುಕ್ತವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಸಂಘ ಸ್ಥಾಪಿಸಿಕೊಂಡಿರುವದು ಒಂದು ಸಾಧನೆ ಇದ್ದಂತೆ ಯಾವುದೇ ಕೆಲಸವನ್ನಾಗಲಿ ಶ್ರದ್ಧೆಯಿಂದ ಮಾಡಬೇಕು, ಮಾಡುವ ಕೆಲಸದಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ರಮೇಶ ವಂಗಿ ಮಾತನಾಡಿ. ದೇಶದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಶೇ.92 ರಷ್ಟಿದೆ. ಅತಿ ಹೆಚ್ಚಿನ ಕಾರ್ಮಿಕರು ಇರುವದನ್ನು ಗಮನಿಸಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸೌಲಭ್ಯ ಪಡೆದು ಕೊಳ್ಳಲು ಇಲಾಖೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು, ವಿಮಾಯೋಜನೆ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಸಹಜ ಮರಣವಾದಲ್ಲಿ 25 ಸಾವಿರದ ಆರ್ಧಿಕ ನೆರವು, ಅಪಘಾತದಲ್ಲಿ ಮರಣವಾದರೆ 5 ಲಕ್ಷದ ಆರ್ಥಿಕ ಸಹಾಯ, ಗಂಭೀರಗಾಯ ಗೊಂಡವರಿಗೆ 2 ಲಕ್ಷರೂ ಗಳ ಪರಿಹಾರ ಹಾಗೂ ಚಿಕಿತ್ಸೆಗಾಗಿ 50 ಸಾವಿರದಿಂದ 1 ಲಕ್ಷರೂಗಳ ವರೆಗೆ ಇಲಾಖೆಯಿಂದ ಆರ್ಥಿಕ ಸಹಾಯ ಪಡೆದುಕೊಳ್ಳ ಬಹುದಾಗಿದೆ. ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯ ಬಹುದಾಗಿದೆ ಎಂದರು.
ಆರ್.ಪಿ.ಪಳಕೆ ಪ್ರಾರ್ಥಿಸಿದರು, ಸಂಘದ ಅಧ್ಯಕ್ಷ ಮೆಹಬೂಬ ಜನವಾಡ ಪ್ರಾಸ್ತಾವಿಕ ಮಾತನಾಡಿದರು, ಆರ್ಟಿಓ ಇಲಾಖೆಯ ಇನ್ಸಪೆಕ್ಟರ್ ಭಾಗ್ಯಶ್ರೀ ಕಟ್ಟಿಮನಿ, ಬೆಂಗಳೂರಿನ ನಾಗೇಶ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ನಗರಸಭೆ ಸದಸ್ಯ ದಿಲಾವರ ಶಿರೋಳ, ಹುಬ್ಬಳ್ಳಿಯ ಮಂಜುನಾಥ ಕೊಟೇಶ್ವರ, ಉಪಾಧ್ಯಕ್ಷ ಬಸವರಾಜ ತೇಲಿ, ವೇದಿಕೆಯಲ್ಲಿದ್ದರು. ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 