ಬಯಲಾಟ ಕಲಾವಿದರಿಗೆ ಸನ್ಮಾನ

ಬಯಲಾಟ ಕಲಾವಿದರಿಗೆ ಸನ್ಮಾನ Tribute to street artists

 

ಯಮಕನಮರಡಿ, 29 : ಹೊಸದಿಗಂತ ಪತ್ರಿಕೆಯ ವರದಿಗಾರರು, ಬೆಳಗಾವಿಯ ಚಕ್ರವರ್ತಿಗಳು, ಹಿರಿಯರು ಆದ ಗೋಪಾಲ ಚಪನಿಯವರಿಗೆ ಇತ್ತಿಚಿಗೆ ವಿಶ್ವ ದರ್ಶನ ಪತ್ರಿಕೆಯವರು ಭಾರತ ಕಲಾಭೂಷನ ಪ್ರಶಸ್ತಿ ನೀಡಿ ಗೌರವಿಸಿದ್ದರ ನಿಮಿತ್ತ ದಿ. 28ರಂದು ಯಮಕನಮರಡಿಯ ಬಿ ಬಿ ಹಂಜಿ ಸಮುದಾಯಭವನ ಆವರಣದಲ್ಲಿ ಸನ್ಮಾನಿಸಲಾಯಿತು. 

ಈ ಸಂಧರ್ಬದಲ್ಲಿ ಸ್ಥಳಿಯ ವಿಧಾನಸಭಾ ಕ್ಷೇತ್ರದ ರಾಜಕೀಯ ಧುರಿಣರಾದ ಮಾರುತಿ ಅಷ್ಟಗಿ , ವಿಜಯ ಜಿನರಾಳಿ, ಸಂತೋಷ ಖೊತ, ರಾಜು ಸಿಂದಗಿ, ಎಸ್ ಬಿ ಹೂನ್ನೂರಿ, ಬಿ ಬಿ ಕೋತೆಕರ, ಕಲ್ಲಪ್ಪಾ ರಜಪೂತ  ಶಿಕ್ಷಕರ ಬಳಗ ಉಪಸ್ಥಿತರಿದ್ದು ಸನ್ಮಾನಿಸಿದರು.