ಶಿವಕುಮಾರ ಪಾಟೀಲರಿಗೆ ಸನ್ಮಾನ
Tribute to Shivakumar Patil
ಶಿವಕುಮಾರ ಪಾಟೀಲರಿಗೆ ಸನ್ಮಾನ
ಹುಬ್ಬಳ್ಳಿ 04 : ಗೋಪನಕೊಪ್ಪದ ಶಾಂತವೀರ ಲೇ ಓಟ್ನ ಸುಂದರವಾದ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದಕ್ಕಾಗಿ ವಾರ್ಡ ನಂಬರ್-28 ರ ಕಾರ್ೋರೇಟರ್ ಆದ ಶಿವಕುಮಾರ ಪಾಟೀಲ ಶಾಂತವೀರ ಲೇ ಓಟ್ ನಿವಾಸಿಗಳ ಸಂಘದ ಪರವಾಗಿ ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷರಾದ ಆನಂದ ಹೆಚ್ ವಾಯಿ ಅವರ ಮನೆಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿದ್ದಕ್ಕಾಗಿ ಕಾಂಟ್ರ್ಯಾಕ್ಟರ್ ಆದ ಸಂಗಮೇಶ ಅವರನ್ನೂ ಸಹ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಿವಕುಮಾರ ಪಾಟೀಲ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ಬಡಾವಣೆಯ ಎಲ್ಲ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಆಶ್ವಾಸನೆ ನೀಡಿದರು. ಕಾರ್ಯಕ್ರಮದಲ್ಲಿ ಆನಂದ ಹೆಚ್ ವಾಯಿ, ಸಂಜೀವಕುಮಾರ ಭೂಶೆಟ್ಟಿ, ಮೃತ್ಯುಂಜಯ್ ಶೆಟ್ಟರ್, ಬಸವರಾಜ್ ಶೆಟ್ಟರ್, ವಿಕ್ರಮ್ ವೆರ್ಣೇಕರ್, ಆರ್ ಕೆ ಹೊಸಮನಿ, ದೀಪಕ್ ಪುರಾಣಿಕ್, ಗುಡ್ಡಪ್ಪ ಭೂಶೆಟ್ಟಿ, ಅಶೋಕ ಬಣಗಾರ್, ರಮೇಶ ಪಾಟೀಲ, ಸುನೀಲ್ ಜೀವನಗೌಡ್ರ, ಸಿದ್ದೇಶ ಅಂಗಡಿ, ರಘು ಸಂಗಮಿ, ಶಿವನಗೌಡ್ರ ಪಾಟೀಲ, ರಾಜು ಭೂಶೆಟ್ಟಿ ಹಾಗೂ ಶಾಂತವೀರ ಲೇ ಓಟ್ ನಿವಾಸಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 