ಜನಪದ ಕಲಾವಿದರನ್ನು ಗೌರವದಿಂದ ನೋಡಿ: ಡಾ. ನಾವಲಗಿ
Treat folk artists with respect: Dr. Navalagi
ಜನಪದ ಕಲಾವಿದರನ್ನು ಗೌರವದಿಂದ ನೋಡಿ: ಡಾ. ನಾವಲಗಿ
ಬೆಳಗಾವಿ 24: ಇಂದಿನ ದಿನಗಳಲ್ಲಿ ಜನಪದ ಕಲಾವಿದರನ್ನು ಕೀಳಾಗಿ ನೋಡುತ್ತಿದ್ದಾರೆ. ಇದರಿಂದ ಈ ಕಲೆಯ ಮೌಲ್ಯ ಕಡಿಮೆಯಾಗುತ್ತಲಿದೆ. ಇದರಿಂದ ಜನಪದ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಬೇಕು. ಅವರನ್ನು ಗೌರವದಿಂದ ಕಾಣಬೇಕು ಎಂದು ಜನಪದ ತಜ್ಞ, ಸಾಹಿತಿ ಗೋಕಾದ ಡಾ. ಸಿ. ಕೆ. ನಾವಲಗಿ ಇಂದಿಲ್ಲಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ದಿ. 23 ಮಂಗಳವಾರದಂದು 98 ನೇ ನಾಡಹಬ್ಬ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ‘ಜನದಪ ಕಲಾವಿದರ ಹಾಡು-ಪಾಡು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಅವರು ಮಾತನಾಡುತ್ತಿದ್ದರು.
ಜಾನಪದ ಕಲಾವಿದರಿಗೆ ಕೊಡಬೇಕಾದ ಸ್ಥಾನ ಮಾನ ನೀಡಬೇಕಾದ ಗೌರವವನ್ನು ನೀಡಿದಾಗ ಮಾತ್ರ ನಶಿಸಿ ಹೋಗುತ್ತಿರುವ ಈ ಕಲೆ ಪುನರ್ಜನ್ಮ ಪಡೆಯಬಹುದೆಂದು ಡಾ. ನಾವಲಗಿಯವರು ಹೇಳಿದರು.
ಸಾನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮಿಜಿಯವರು ತಮ್ಮ ಆಶಿರ್ವಚನದಲ್ಲಿ ಜಾನಪದ ಕಲಾವಿದರಿಗೆ ಮಠಗಳು, ಸಂಘಸಂಸ್ಥೆಗಳು ಮಹತ್ವ ನೀಡಬೇಕು. ಪ್ರೋತ್ಸಾಹ ನೀಡಬೇಕು, ಸರ್ಕಾರ ಕೂಡ ಈ ಕಲಾವಿದರ ಮೇಲೆ ಬೆಳಕನ್ನು ಚೆಲ್ಲಿ ರಾಜ್ಯ ಮಟ್ಟದ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದರ ಮೂಲಕ ಎಲ್ಲರಿಗೂ ಪರಿಚಯಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ. ಬಸವರಾಜ ಜಗಜಂಪಿಯವರು ಮಾತನಾಡಿ ಜನಪದ ಕಲಾವಿದರು ಪ್ರತಿಭಾವಂತರು. ಈ ನೆಲದ ಮಣ್ಣಿನಿಂದ ಹುಟ್ಟಿದವರು. ನಿರಕ್ಷರಿಗಳು. ಹೆಸರು ಇಲ್ಲದವರು. ಹೆಸರು ಒಲ್ಲದವರು. ಈ ಕಲೆಯನ್ನು ನಶಿಸಿ ಹೋಗದಂತೆ ಕಾಳಜಿಯಿಂದ ನಡೆದುಕೊಳ್ಳಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಗುರುಗೌಡ ಪಾಟೀಲ, ಡಾ. ಉಮೇಶ ಪಾಟೀಲ, ಜಯಶ್ರೀ ಮಾಳಗಿ, ರಾಜು ಪದ್ಮಣ್ಣವರ, ಸಿ. ಎಂ. ನರಸಣ್ಣವರ ಉಪಸ್ಥಿತರಿದ್ದರು. ಪ್ರೊ. ಮಹಾಂತೇಶ ಕಂಠಿ ಸ್ವಾಗತಿಸಿದರು. ಸುಮಾ ಕಿತ್ತೂರ ವಂದಿಸಿದರು. ಅನ್ನಪೂರ್ಣಾ ಹಿರೇಮಠ ನಿರೂಪಿಸಿದರು. ರಾಜೇಶ್ವರಿ ಹಿರೇಮಠರ ‘ಬೆಳ್ಳಿಚುಕ್ಕಿ’ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 