ವಿದ್ಯುತ್ ತಂತಿ ತಗುಲಿ ಕಬ್ಬು ತುಂಬಿದ ಟ್ರ್ಯಾಕ್ಟರಗೆ ಬೆಂಕಿ

ವಿದ್ಯುತ್ ತಂತಿ ತಗುಲಿ ಕಬ್ಬು ತುಂಬಿದ ಟ್ರ್ಯಾಕ್ಟರಗೆ ಬೆಂಕಿ Tractor loaded with sugarcane catches fire after hitting an electric wire

ಜಮಖಂಡಿ 20: ನಗರದ ಚಂದ್ರಗಿರಿ ಪೇಠದ ಹತ್ತಿರ ಕಬ್ಬು ತುಂಬಿದ ಟ್ರ್ಯಾಕ್ಟರ ವಾಹನಕ್ಕೆ ವಿದ್ಯುತ್ ತಂತಿ ತಗುಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಜರುಗಿದೆ. ರಬಕವಿ- ಬನಹಟ್ಟಿ ತಾಲೂಕಿನ ರಬಕವಿಯ ಮಾದೇವ ಲಕ್ಷ್ಮಣ ಕುರಾಬಿ ಅವರ ಟ್ರ್ಯಾಕ್ಟರ ಚಾಲಕ ವಿಠ್ಠಲ ಯಂಕಪ್ಪ ಗಸ್ತಿ ಕಬ್ಬು ತುಂಬಿಕೊಂಡು ಸಿದ್ದಾಪೂರ ಸಕ್ಕರೆ ಕಾರ್ಖಾನೆಗೆ ಹೋಗುವ ಸಮಯದಲ್ಲಿ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ತಗುಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದಿರುತ್ತದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳಾದ ಎ.ಎಸ್‌.ಒ. ನಿಂಗಪ್ಪ ಹೂಗಾರ, ಸಿಬ್ಬಂದಿಗಳಾದ ಮಾದೇವ ಹಳೇಗೌಡರ, ಟಿ.ವಾಯ್‌.ಭಂಡಾರಿ, ಎಸ್‌.ಎಸ್‌.ಭಜಂತ್ರಿ, ಕೆ.ಬಿ.ಮುಲ್ಲಾ, ಶ್ರೀಶೈಲ ಹಿರೇಮಠ ಸೇರಿ ಅಗ್ನಿಯನ್ನು ನಂದಿಸಲು ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಶಹರ ಪೋಲಿಸ್ ಠಾಣೆಯ ಸಿಬ್ಬಂದಿಗಳು ಸಹ ಇದ್ದರು ಎನ್ನಲಾಗಿದೆ.