ಇಂದು 28ನೇ ವರ್ಷದಅಯ್ಯಪ್ಪಸ್ವಾಮಿ ಮಹಾಪೂಜೆ
ಕೊಪ್ಪಳ 31 : ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಅಯ್ಯಪ್ಪಸ್ವಾಮಿ ವಿವಿದೋದ್ಧೇಶ ಸೇವಾ ಸಂಘ (ರಿ) ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ 28ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮವನ್ನು ದಿ.01-01-2025 ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 5.30ಕ್ಕೆ ಜರುಗುವಗಣ ಹೋಮದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು. ನಂತರ ಬೆಳಿಗ್ಗೆ 10 ಗಂಟೆಗೆ ನಗರದ ಗೌರಿಶಂಕರ ದೇವಸ್ಥಾನದಿಂದ ಮಂಗಳ ವಾದ್ಯಗಳು ಹಾಗೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಶರಣುಘೋಷಗಳೊಂದಿಗೆ ಅಯ್ಯಪ್ಪಸ್ವಾಮಿ ಮೂರ್ತಿ ಮೆರವಣಿಗೆ ನಡೆಸಲಾಗುವುದು.ಮಧ್ಯಾಹ್ನ 1.30ಕ್ಕೆ ಅನ್ನಸಂಪತರೆ್ಣ ನಡೆಸಲಾಗುವುದು.ಸಂಜೆ ನಡೆಯುವಜ್ಯೋತಿ ಪೂಜೆಯ ಸಾನಿಧ್ಯವನ್ನು ಶ್ರೀ ಗವಿಮಠ ಸಂಸ್ಥಾನದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು. ಲಿಂ.ವಿಜಯಲಕ್ಷ್ಮಿದಾಸ್ ಪಣಿಕ್ಕರ್ ಗುರುಸ್ವಾಮಿಇವರ ಶಿಷ್ಯರಾದ ಕೇರಳದ ಗಂಗಾಧರ ಗುರುಸ್ವಾಮಿಗಳು ಜ್ಯೋತಿ ಮಹಾಪೂಜೆಯನ್ನು ನೆರವೇರಿಸುವರು. ಇದರೊಂದಿಗೆ ಭದ್ರವಾತಿಯ ಲೋಕನಾಥ ಬ್ರದರ್ಸ್ಇವರಿಂದ ಸಂಗೀತ ಭಕ್ತಿ ಸುಧಕಾರ್ಯಕ್ರಮವನ್ನು ನಡೆಸಲಾಗುವುದು. ಕಾರಣ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಜ್ಯೋತಿ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಲಿಯುಗ ವರದ ಅಯ್ಯಪ್ಪಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಂಘದ ವತಿಯಿಂದ ಪ್ರಕಟಣೆಯಲ್ಲಿ ಕೋರಲಾಗಿದೆ.