ಮಕ್ಕಳಲ್ಲಿ ಕಲಿಕಾ ಮಟ್ಟಉತ್ತಮ ಪಡಿಸಲು ಎಸ್ಎಸ್ಎಲ್ಸಿ ಮಕ್ಕಳ ವಿಶೇಷ ತರಗತಿ
ಧಾರವಾಡ 09: ಶಹರದ ವಲಯದ ಸರಕಾರಿ ಪ್ರೌಢ ಶಾಲೆ ಆರ್ ಎನ್ ಶೆಟ್ಟಿ ಕ್ರೀಡಾಂಗಣ ಹತ್ತಿರ ಧಾರವಾಡ ಇಲ್ಲಿಗೆ ಎಸ್ ಎಸ್ ಎಲ್ ಸಿ ಮಕ್ಕಳ ವಿಶೇಷ ತರಗತಿಗಳನ್ನು ವೀಕ್ಷಿಸಿ ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿ "ಮಕ್ಕಳಲ್ಲಿ ಕಲಿಕಾ ಮಟ್ಟಉತ್ತಮ ಪಡಿಸಲು ಹಾಗೂ ಪರೀಕ್ಷಾ ಭಯ ನಿವಾರಿಸಲು ವಿಷಯವಾರು ಶಿಕ್ಷಕರು ಮುಗಿದ ಅಧ್ಯಾಯಗಳನ್ನು ವಿಶೇಷ ತರಗತಿಗಳ ಮೂಲಕ ಪುನರಾವರ್ತನೆ ಮಾಡುವುದು ಕಡ್ಡಾಯ ಎಂದು ಧಾರವಾಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎ ಎ ಖಾಜಿಯವರು ಅಭಿಪ್ರಾಯ ಪಟ್ಟರು.
ಈ ನಿಟ್ಟಿನಲ್ಲಿ ಶಹರವಲಯದ ಎಲ್ಲಾ ಪ್ರೌಢ ಶಾಲೆಗಳನ್ನು ವಿಶೇಷ ತರಗತಿಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಡೆಸುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಇದನ್ನು ಪ್ರತಿನಿತ್ಯ ಮುಖ್ಯೋಪಾಧ್ಯಾಯರು ಮೇಲ್ವಿಚಾರಣೆ ಮಾಡುವ ಮೂಲಕ ಇಲಾಖೆಯ ಮಹತ್ವದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೂಚಿಸಿದರು.
ಮುಖ್ಯೋಪಾಧ್ಯಾಯ ಶ್ರೀದೇವಿ ಲದ್ದಿಮಠ, ಶಿಕ್ಷಣ ಸಂಯೋಜಕರು ಕೆ ಎಫ್ ಜಾವೂರ ಹಾಗೂ ಸಮಾಜ ವಿಜ್ಞಾನ ಶಿಕ್ಷಕ ತಳವಾರ ಹಾಜರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 