ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಗುರು ಹೊಂದಬೇಕೆಂದು
To build a good society, one must have a Guru.
ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಗುರು ಹೊಂದಬೇಕೆಂದು
ಸಂಬರಗಿ 28: ಸಮಾಜದಲ್ಲಿ ನೌಕರಿಗಾಗಿ ಬದುಕುವುದಕ್ಕಿಂತ ಒಳ್ಳೇಯ ಸಮಾಜ ನಿರ್ಮಾಣ ಮಾಡಲು ಗುರು ಹೊಂದಬೇಕೆಂದು ಅಮರೇಶ್ವರ ಮಹಾರಾಜರು ಹೇಳಿದರು.
ಹಣಮಾಪೂರ ಗ್ರಾಮದ ಹೊರವಲಯದ ಮದಗುಂಡೇಶ್ವರ ಮಹಾರಜರ ಮಠದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಈ ಸಮುದಾಯ ಭವನವನ್ನು ವಿಷೇಶ ದಿನಗಳಂದು ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ ದೇಶದ ಸಂಸ್ಕೃತಿ ಉಳಿಯಬೇಕಾದರೆ ಶಾಶ್ವತಾಗಿ ಸಮಾಝ ನಿರ್ಮಾಣ ಮಾಡಲು ಯುವಕರು ಮುಂದೆ ಬರಬೇಕು ಇಗೀನ ಯುವಕರ ಕೆಟ್ಟ ಚಟ್ಟದಿಂದ ದೂರಾಗಿ ಭಕ್ತಿ ಮಾರ್ಗದಲ್ಲಿ ಪಾಲ್ಗೋಳಬೇಕೆಂದು ವಿನಂತಿಸಿದರು.
ಈ ಸಮುದಾಐ ಭವನಕ್ಕೆ ರಾಜ್ಯಸಭಾ ಸದಸ್ಯರಾದ ಈರಣ್ಣ ಕಾಡಾಡಿ ಇವರು ರೂ.10 ಲಕ್ಷ ಅನುದಾನ ನೀಡಿ ಸಮುದಾಯ ಭವನ ನಿರ್ಮಾಣ ಮಾಡಲು ಸಹಕರಿಸಿದ್ದಕ್ಕಾಗಿ ಸಮಸ್ತ ಹಣಮಾಪೂರ ಗ್ರಾಮಸ್ಥರು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.
ಈ ವೇಳೆ ಶ್ರೀ ಬನಸಿದ್ದೇಶ್ವರ ಮಹಾರಾಜರು, ಶ್ರೀ ಸದಾಶಿವ ಅಜ್ಜಾರು, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ವಿನಾಯಕ ಬಾಗಡಿ ಮದಭಾವಿ ಗ್ರಾಮ ಫಂಚಾಯತ ಅಧ್ಯಕ್ಷರಾದ ಮಹಾದೇವ ಕೋರೆ ಪಿಕೆಪಿಎಸ್ ಅಧ್ಯಕ್ಷರಾದ ನಿಜಗುಣಿ ಮಗದುಮ್ಮ. ಸದಾಶಿವ ನಾಯಕ, ಮಾಯಪ್ಪ ರೋಗಿ, ವಿಠ್ಠಲ ಮಜ್ಜಗಿ, ಅಪ್ಪಾಸಾಬ ಮೇತ್ರಿ, ಅಣ್ಣಾಸಾಬ ಮೇಂಡಿಗೇರಿ ಹಾಗೂ ಕೌವಲಗುಡ್ಡ, ವಡೆರಹಟ್ಟಿ, ಬೇವನೂರ ಮಾಯನಟ್ಟಿ ಹಾಗೂ ಹಣಮಾಪೂರ ಒಡೆಯರು ಹಾಗೂ ಪೂಜಾರಿಗಳು ಸೇರಿದಂತ ಗಣ್ಯಮಾನುರಯ ಉಪಸ್ಥಿತಿರಿದ್ದರು ಮಾಯಪ್ಪ ಮಜ್ಜಗಿ ಸ್ವಾಗತಿಸಿದರು ರಮೇಶ ಕೋಳಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 