ಆದಿವಾಸಿಗಳನ್ನು ನಾಗರಿಕ ಸಮಾಜಕ್ಕೆ ತರಲು ಬಿ.ಎ.ಜೆ.ಎಸ್.ಎಸ್.ಸಂಸ್ಥೆ ಕಾರ್ಯ ಶ್ಲಾಘನೀಯ: ಡಾ. ಕುಬೇರ್ಪ
The work of BAJSS in bringing tribals into civil society is commendable: Dr. Kuberpa
ಆದಿವಾಸಿಗಳನ್ನು ನಾಗರಿಕ ಸಮಾಜಕ್ಕೆ ತರಲು ಬಿ.ಎ.ಜೆ.ಎಸ್.ಎಸ್.ಸಂಸ್ಥೆ ಕಾರ್ಯ ಶ್ಲಾಘನೀಯ: ಡಾ. ಕುಬೇರ್ಪ
ರಾಣೇಬೆನ್ನೂರು 09: ಭಾರತ ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ದೇಶಾದ್ಯಂತ ಬಹಳಷ್ಟು ಜನರು ಆದಿವಾಸಿಗಳಾಗಿದ್ದರು ಭಾಷೆ ಗೊತ್ತಿರಲಿಲ್ಲ, ಬಟ್ಟೆ ಬಳಕೆ ಇರಲಿಲ್ಲ, ಇಂತಹ ಸಂದರ್ಭದಲ್ಲಿ ಠಕ್ಕರ ಬಾಪಾ ಎಂಬುವರು 1949 ರಲ್ಲಿ ಭಾರತೀಯ ಆದಿಮ ಜಾತಿ ಸೇವಕ ಸಂಘ (ಬಿ.ಎ.ಜೆ.ಎಸ್.ಎಸ್) ಸ್ಥಾಪಿಸಿ ಆದಿವಾಸಿಗಳಿಗೆ ಶಿಕ್ಷಣ ಅರಿವು ನೀಡಿ ನಾಗರೀಕ ಪ್ರಪಂಚಕ್ಕೆ ಕರೆ ತರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿ.ಎ.ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಡಾ. ಆರ್.ಎಂ.ಕುಬೇರ್ಪ ನುಡಿದರು.ಅವರು ಇಂದು ಬಿ.ಎ.ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಅಂತರಾಷ್ಟ್ರೀಯ ಆದಿವಾಸಿ ದಿನ ಆಚರಣೆಗೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಆರಂಭದಲ್ಲಿ ಉಪ ಪ್ರಾಚಾರ್ಯರಾದ ಡಾ.ದೇವರಾಜ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ಹನುಮಂತಪ್ಪ ಬ್ಯಾಡಗಿ ಸ್ವಾಗತಿಸಿದರು, ಕೊನೆಯಲ್ಲಿ ಬಸವರಾಜ ಮಾಳೇನ ಹಳ್ಳಿಯವರು ವಂದಿಸಿದರು. ವೇದಿಕೆಯಲ್ಲಿ ಬಿ.ಎ.ಜೆ.ಎಸ್.ಎಸ್.ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ.ಕೆ.ಕೆ. ಹಾವಿನಾಳ, ಶ್ರೀ.ಆರ್.ಗೋಪಾಲ ರೆಡ್ಡಿ, ಹೆಚ್.ಎ. ಭಿಕ್ಷಾವರ್ತಿಮಠ ಮತ್ತುಅಂಗ ಸಂಸ್ಥೆಯವಿವಿಧಕಾಲೇಜಿನ ಪ್ರಾಚಾರ್ಯರಾದ ಡಾ.ಸುರೇಶ ಬಣಕಾರ, ಪ್ರಕಾಶ ಬಸಪ್ಪನವರು, ಹಾಲೇಶ ಗೌಡಶಿವಣ್ಣನವರ, ಮೃತ್ಯುಂಜಯ, ಕುಬೇರ ನಾಯ್ಕ, ಹೆಚ್. ಬಿ. ಪಟ್ಟಣಶೆಟ್ಟಿ, ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯಶ್ರೀ.ಎನ್. ಕೆ. ಪ್ರವೀಣಕುಮಾರ, ಎಸ್.ಆರ್. .ರಾಯಚೂರ, ಎಸ್,ಎಸ್, ಮಠದ ಪರಶುರಾಮಚನ್ನಪ್ಪ ವಿವಿಧ ವಿಷಯಗಳ ಪ್ರಾಧ್ಯಾಪಕರು, ಉಪನ್ಯಾಸಕರಕು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 