ಉತ್ತರ ಕರ್ನಾಟಕ ಭಾಗದ ಜನತೆಯ ನೀರೀಕ್ಷೆ ಮತ್ತೂಮ್ಮೆ ಹುಸಿಯಾಗಿದೆ : ಪ್ರಶಾಂತ ಅರಳಿಕಟ್ಟಿ

ಉತ್ತರ ಕರ್ನಾಟಕ ಭಾಗದ ಜನತೆಯ ನೀರೀಕ್ಷೆ ಮತ್ತೂಮ್ಮೆ ಹುಸಿಯಾಗಿದೆ : ಪ್ರಶಾಂತ ಅರಳಿಕಟ್ಟಿ The expectations of the people of North Karnataka have been dashed once again: Prashantha Aralaikat


ಬೆಳಗಾವಿ 20: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನವು ಉತ್ತರ ಕರ್ನಾಟಕ ಭಾಗದ ಜನತೆಯ ನೀರೀಕ್ಷೆ ಮತ್ತೂಮ್ಮೆ ಹುಸಿಯಾಗಿಸಿದೆ, ಈ ಅಧಿವೇಶನದಲ್ಲಿ ಸರಕಾರ ಉತ್ತರ ಕರ್ನಾಟಕದ ಜಲ್ವಂತ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಮಾಡುವದರಲ್ಲಿ ವಿಫಲವಾಗಿದೆ ಈ ಭಾಗದ ಮುಖ್ಯ ಸಮಸ್ಯೆಗಳಾದ ರಸ್ತೆ,ನೀರಾವರಿ,ಆರೋಗ್ಯ,ಶಿಕ್ಷಣ,ಉದ್ಯೋಗ ಸೇರಿದಂತೆ ಇನ್ನೂ ಅನೇಕ ಅಭಿವೃದ್ದಿ ಕಾರ್ಯಗಳಿಗೆ ಪರಿಹಾರ ಸಿಗುತ್ತೆ ಅಂತಾ ಈ ಭಾಗದ ಜನತೆಯು ನೀರೀಕ್ಷಿಸುತ್ತಿತ್ತು ಆದರೆ ಆ ನೀರೀಕ್ಷೆ ಹಾಗೂ ಭರವಸೆ ಮತ್ತೇ ಹಾಗೇ ಉಳಿಯಿತು ಒಟ್ಟಾರೆ ಈ ಅಧಿವೇಶನ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ಸಿಗಲಿಲ್ಲ ತಾರ್ಕಿಕ ಅಂತ್ಯ ಕಾಣಲಿಲ್ಲ ಎಂದು ಹೇಳಬಹುದು.