ಗವಿಮಠದ ಮಹಾದಾಸೋಹಕ್ಕೆ ಹರಿದು ಬರುತ್ತಿರುವರೊಟ್ಟಿ ಹಾಗೂ ದವಸ,ಧಾನ್ಯಗಳು
ಕೊಪ್ಪಳ 05 :ದಕ್ಷೀಣ ಭಾರತದ ಕುಂಭಮೇಳ ಎಂದು ಪ್ರಖ್ಯಾತಿ ಪಡೆದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕಾಗಿ ಸದ್ಭಕ್ತರಿಂದ ದವಸ-ಧಾನ್ಯ, ರೊಟ್ಟಿಗಳನ್ನು ಮಠಕ್ಕೆ ತಂದು ಅರ್ಿಸುತಿದ್ದಾರೆ. ಇಂದು ಕನಕಗಿರಿ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದ ಸದ್ಭಕ್ತರಿಂದ 56 ಪಾಕೇಟ್ನೆಲ್ಲು ಮತ್ತು ಇತರ ದವಸಧಾನ್ಯ ಹಾಗೂ ಬಳ್ಳಾರಿ ತಾಲೂಕಿನ ಬೆವಿನಹಳ್ಳಿ ಗ್ರಾಮದ ಸದ್ಭಕ್ತರಿಂದ10 ಕ್ವಿಂಟಲ್ ಅಕ್ಕಿ ಟ್ರ್ಯಾಕ್ಟರ್ ಹಾಗೂ ಲಘು ವಾಹನಗಳ ಮೂಲಕ ಭಕ್ತಿ ಭಾವ,ಸಡಗರದೊಂದಿಗೆ ಶ್ರೀಗವಿಮಠಕ್ಕೆ ಆಗಮಿಸಿ ಮಹಾ ದಾಸೋಹಕ್ಕೆ ಸಲ್ಲಿಸಿದರು.ಇದರಿಂದಾಗಿ ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ ಆರಂಭವಾಗಿದೆ. ದಾನಿಗಳಿಗೆ ಪೂಜ್ಯರು ಆಶಿರ್ವದಿಸಿದ್ದಾರೆ.