ತಾಳಿಕೋಟೆ: ನೀರಿನ ಆಹಾಕಾರ ತಹಶಿಲ್ದಾರ ಕಚೇರಿಮುಂದೆ ಪ್ರತಿಭಟನೆ

ಲೋಕದರ್ಶನ ವರದಿ

ತಾಳಿಕೋಟೆ 21: ತಾಲೂಕಿನ ನಾಗೂರ ಗ್ರಾಮದಲ್ಲಿ ಕುಡಿಯುವ ನೀರಿನ ಆಹಾಕಾರ ಬುಗಿಲೆದ್ದಿದ್ದರಿಂದ ಗ್ರಾಮಸ್ಥರರು ತಹಶಿಲ್ದಾರ ಕಚೇರಿಯ ಮುಂದೆ ಖಾಲಿ ಕೊಡಗಳೊಂದಿಗೆ ಮಂಗಳವಾರರಂದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.

ಮೂಕೀಹಾಳ ಗ್ರಾಂ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ನಾಗೂರ ಗ್ರಾಮಕ್ಕೆ ಬಹುಹಳ್ಳಿ ಕುಡಿಯುವ ಯೋಜನೆಯ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು ಆದರೆ ಈ ಯೋಜನೆಗೆ ಸಂಬಂದಿಸಿ ಕೇರೆಯಲ್ಲಿ ಸಂಗ್ರಹಿಸಿದ ನೀರೆಲ್ಲವೂ ಕಲುಷಿತಗೊಂಡಿವೆ ಇಂತಹ ನೀರನ್ನೇ ವಾರಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ ಈ ನೀರು ವಾಸನೆ ಬರುತ್ತಿದ್ದು ಇಂತಹ ನೀರಿನ ಸೇವನೆಯಿಂದ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತಾ ಸಾಗಿದೆ ಗ್ರಾಮದಲ್ಲಿ ಒಂದೂ ಕೂಡಾ ಬೋರವ್ಹೇಲ್ಗಳನ್ನು ಕೊರೆಯಿಸಿಲ್ಲಾ ಈ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಜಾನುವಾರುಗಳಿಗೆ ಹನಿ ನೀರಿಗೂ ಪರದಾಡುವಂತಾಗಿದೆ ಗ್ರಾಮದಲ್ಲಿರುವ ಭಾವಿಗಳೆಲ್ಲವೂ ಬತ್ತಿ ಹೋಗಿವೆ ಇಲ್ಲಿಯ ಜನರು ಹನಿ ನೀರು ಹುಡುಕಿಕೊಂಡು ಸುಮಾರು 4ಕೀಲೋ ಮೀಟರ್ ಅಂತರದಲ್ಲಿರುವ ಬಪ್ಪರಗಿ ಗ್ರಾಮಕ್ಕೆ ಎತ್ತಿನ ಬಂಡೆಯಲ್ಲಿ, ಸೈಕಲ್ ಮೇಲೆ ಹೋಗಿ ತರುತ್ತಿದ್ದೇವೆ ನಮಗೆ ಬಂದಿರುವ ಕುಡಿಯುವ ನೀರಿನ ಕಷ್ಟಕ್ಕೆ ಯಾವೋಬ್ಬ ಅಧಿಕಾರಿಗಳು ಸ್ಪಂದಿಸುತ್ತಿಲ್ಲಾ ನೀರಿನ ಸಮಸ್ಯೆ ಕುರಿತು ಸಾಕಷ್ಟು ಭಾರಿ ಜಿಪಂ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ, ತಾಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿ ಲಿಖಿತ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಪ್ರಯೋಜನೆಗೆ ಬಂದಿಲ್ಲಾವೆಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ತಾಲೂಕಾ ತಹಶಿಲ್ದಾರ ನಿಂಗಪ್ಪ ಬಿರಾದಾರ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಯನ್ನು ಆಲಿಸಿದರಲ್ಲದೇ ಸ್ಥಳದಲ್ಲಿಯೇ ದೂರವಾಣಿ ಮುಖಾಂತರ ಮೂಕೀಹಾಳ ಗ್ರಾಂಪಂ ಅಭಿವೃದ್ದಿ ಅಧಿಕಾರಿಯನ್ನುಸಂಪರ್ಕಿಸಿ ನಾಗೂರ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕೆಂದು ಸೂಚಿಸಿದರು. ನಂತರ ಗ್ರಾಮಸ್ಥರೊಂದಿಗೆ ಮಾತನಾಡಿದ ತಹಶಿಲ್ದಾರ ನಿಂಗಪ್ಪ ಬಿರಾದಾರ ಅವರು ಕುದ್ದಾಗಿ ಗ್ರಾಮಕ್ಕೆ ನಾನೇ ಬೆಟ್ಟಿ ನೀಡುತ್ತೇನೆ ಸ್ಥಾನಿಕ ಚೌಕಸಿ ನಡೆಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಜರುಗಿಸುತ್ತೇನೆಂದು ನಾಗೂರ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲಾ ಸದರಿ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ರಮ ಜರುಗಿಸಲಾಗುವದೆಂದು ಗ್ರಾಮಸ್ಥರರಿಗೆ ಬರವಸೆ ನೀಡಿದರು.

ತಹಶಿಲ್ದಾರರ ಬರವಸೆಯ ಮಾತಿಗೆ ಮನ್ನಣೆ ನೀಡಿದ ಗ್ರಾಮಸ್ಥರರು ಒಂದು ವಾರದೊಳಗೆ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಿಕೊಡಿ ಎಂದು ಮನವಿ ಮಾಡಿ ತೆರಳಿದರು.

ಈ ಸಮಯದಲ್ಲಿ ನಾಗೂರ ಗ್ರಾಮದ ಮುಖಂಡರುಗಳಾದ ಶಿವರಾಜ ಗುಂಡಕನಾಳ, ಜೆಟ್ಟೆಪ್ಪ ಭಂಟನೂರ, ಶಿವರಾಯ ಮುದ್ನೂರ, ಮಲ್ಲಪ್ಪ ಬಿರಾದಾರ, ಮಾಳಪ್ಪ ಬಿರಾದಾರ, ಹಣಮಂತ್ರಾಯ ಕೇಂಭಾವಿ, ಮಲ್ಲಯ್ಯ ಹಿರೇಮಠ, ಆನಂದ ಹೂಗಾರ, ಶರಣು ಗುಂಡಕನಾಳ, ಶಿವಪ್ಪ ಹೂಗಾರ, ಒಳಗೊಮಡು ನೂರಾರು ಜನರು ಇದ್ದರು.