ಶಿಕ್ಷಕರು ಮತ್ತು ಸಿಬ್ಬಂದಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ: ಶಶಿಕಾಂತ್ ಕಾಂಬಳೆ
ಮಾಂಜರಿ 30: ಕೇಂದ್ರ ಸರ್ಕಾರದ ನವೋದಯ ವಿದ್ಯಾಲಯ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಿರುವ ವಸತಿ ಶಾಲೆಗಳ ಶಿಕ್ಷಕರ ವೇತನ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇದೆ ಮೇ 26ರಿಂದ ಕ್ರೈಸ್ ನೌಕರರು ಧರಣಿ ನಡೆಸಿ ಸರ್ಕಾರಕ್ಕೆ ಮನವಿಯನ್ನು ಅರ್ಿಸಿದರು ಕೂಡ ಸರಕಾರ ಸದರಿ ಶಿಕ್ಷಕರ ಬೇಡಿಕೆಗೆ ಸ್ಪಂದಿಸಿಲ್ಲ ಆದ್ದರಿಂದ ಈ ವರ್ಷ ಶೈಕ್ಷಣಿಕ ವರ್ಷಕ್ಕೆ ಪ್ರಾರಂಭವಾಗದ ಕಾರಣ ಸರ್ಕಾರದ ಧೋರಣೆಯನ್ನು ಖಂಡಿಸಿ ವಸತಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದಾರೆ ಎಂದು ನಿಪ್ಪಾಣಿ ತಾಲೂಕಿನ ಗವಾನ್ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಯಾದ ಶಶಿಕಾಂತ್ ಕಾಂಬಳೆ ತಿಳಿಸಿದ್ದಾರೆ
ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅದಿನ ವಸತಿ ಶಾಲೆಗಳನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ( ಕ್ರೈಸ್ ) 2001-02 ನೇ ಸಾಲಿನವರೆಗೆ ನಿರ್ವಹಣೆ ಮಾಡುತ್ತಿತು ಆದರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತನ್ನ ವಸತಿ ಶಾಲೆಗಳನ್ನು ಮರಳಿ ತನ್ನ ಇಲಾಖೆಗೆ ಪಡೆದುಕೊಂಡಿದೆ. ಅಲ್ಪಸಂಖ್ಯಾತರ ಇಲಾಖೆ ಶಾಲೆಗಳನ್ನು ಹೊರತುಪಡಿಸಿ 834 ವಸ್ತಿ ಶಾಲೆಗಳು ಹಾಗೂ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.
2012ನೇ ಸಾಲಿನಲ್ಲಿ ನೇಮಕಾತಿಯಾದ 6800 ಸಿಬ್ಬಂದಿ ಕೆಲಸ ಮಾಡುತ್ತಿದ್ದು ಈ ಸಿಬ್ಬಂದಿಯ ಅಳಲನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಶಿಕ್ಷಕ ಸಮುದಾಯವು ಆಕ್ರೋಶ ಭರಿತವಾಗಿ ಧರಣಿಯನ್ನು ಹಮ್ಮಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ ಇವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಅಲ್ಪಸಂಖ್ಯಾತರ ವಸತಿ ಶಾಲೆಗಳ ಶಿಕ್ಷಕರ ಸೌಲಭ್ಯಗಳು ಇವರಿಗೆ ದೊರೆಯದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬೇಡಿಕೆಗಳು ತೋರಿತವಾಗಿ ಈಡೇರಿದಿದ್ದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳ ಮುಂದೆಗಳ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದು ಅಥವಾ ಆಯಾ ಶಾಲೆಗಳ ಮುಂಭಾಗದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಆ ನಿರ್ದಿಷ್ಟಾವಧಿ ಧರಣಿಯನ್ನು ನಡೆಸಲು ತೀರ್ಮಾನಿಸಲಾಗಿದೆ
*ನೌಕರರ ಪ್ರಮುಖ ಬೇಡಿಕೆಗಳು*
ಸರ್ಕಾರವೇ ನೇರವಾಗಿ ವಸತಿ ಶಾಲೆಗಳನ್ನು ತಮ್ಮ ಇಲಾಖೆಗಳಿಗೆ ಸೇರಿಸಿಕೊಂಡು ಶಿಕ್ಷಣ ಸಂಸ್ಥೆಗಳ ಸಂಘದಿಂದ ಮುಕ್ತಿ ದೊರೆಯುವಂತೆ ಮಾಡಬೇಕು
ವಸತಿ ಶಿಕ್ಷಣ ನಿರ್ದೇಶನಾಲಯವನ್ನು ರಚಿಸಬೇಕು ಕಾಯಂ ನೇಮಕಾತಿ ಹೊಂದಿರುವ ಸಿಬ್ಬಂದಿಗಳಿಗೆ ಸಂಬಂಧಿಸಿದ ಇಲಾಖೆಗಳ ಅಡಿಯಲ್ಲಿ ಕೆಲಸ ಮಾಡುವಂತೆ ಆದೇಶಿಸಬೇಕು
ಎಲ್ಲ ಸರ್ಕಾರಿ ನೌಕರರಿಗೆ ಇರುವಂತೆ ಜ್ಯೋತಿ ಸಂಜೀವಿನಿ ಆರೋಗ್ಯ ಸಂಜೀವಿನಿ ಯೋಜನೆಗಳನ್ನು ತಮಗೂ ಸಿಗುವಂತೆ ಕ್ರಮ ಕೈಗೊಳ್ಳಬೇಕು
ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸಿಬ್ಬಂದಿ ಗ್ರಹಗಳಲ್ಲಿ ಉಳಿದ ಶಿಕ್ಷಕರ ಮನೆ ಬಾಡಿಗೆ ಬತ್ತೆ ಕಡಿತದಿಂದ ವಿನಾಯಿತಿ ನೀಡುವುದರಿಂದ ಹಿಡಿದು ಇನ್ನು ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವಲ್ಲಿ ಪ್ರಯತ್ನವನ್ನು ಮಾಡುತ್ತಿದ್ದಾರೆ ವಸತಿ ಶಾಲೆಗಳಲ್ಲಿ ಹೆಚ್ಚುವರಿ ಕಾರ್ಯಭಾರ ಹಾಗೂ ಇತರೆ ಜವಾಬ್ದಾರಿಗಳು ಇರುವುದರಿಂದ ಇಲ್ಲಿ ಕೆಲಸ ಮಾಡುವ ನೌಕರರಿಗೆ ಶೇಕಡ 10 ರಷ್ಟು ವಿಶೇಷ ಭತ್ತೆ ಮಂಜೂರಾತಿ ಮಾಡಿ ಎಂದು ಕ್ರೈಸ್ ನೌಕರರ ವಿಶೇಷ ಬೇಡಿಕೆಯಾಗಿದೆ