ಶಿಕ್ಷಣ ಸಂಸ್ಕಾರ ಸಂಸೃತಿಯಿಂದ ಉನ್ನತ ಸ್ಥಾನ ಬೆಳೆಯಲು ಸಾಧ್ಯ ತಾಲೂಕು ಘಟಕ ಅಧ್ಯಕ್ಷ ಪ್ರಸಾದ ಗಡಾದ್
Taluk unit president Prasad Gadad says education and culture can lead to higher positions
ಕಂಪ್ಲಿ 14 : ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸೃತಿ ಜೊತೆಗೆ ಶಿಕ್ಷಣದಿಂದ ಉನ್ನತ ಸ್ಥಾನ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಂಪ್ಲಿ ತಾಲೂಕು ಬಣಜಿಗ ಸಮಾಜದ ತಾಲೂಕು ಘಟಕ ಅಧ್ಯಕ್ಷ ಪ್ರಸಾದ್ ಗಡಾದ ಹೇಳಿದರು ಪಟ್ಟಣದ ಶ್ರೀ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದಿಂದ ಆಶ್ರಯದಲ್ಲಿ ಕಂಪ್ಲಿ ತಾಲೂಕು ಬಣಜಿಗ ಸಂಘದಿಂದ ಹಮ್ಮಿಕೊಂಡಿದ್ದ ಬಣಜಿಗ ಸಂಘದ 23ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬಸವಣ್ಣ ಎಡೆಯೋರು ಸಿದ್ದಲಿಂಗೆಶ್ವರ ಮತ್ತು ಅಕ್ಕಮಹಾ ದೇವಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ ನಾವೇಲ್ಲರು ಸಂಘಟಿತರಾಗಲು ಮುಂದಾಗಬೇಕು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿದಾಗ ಸರ್ಕಾರದ ಹುದ್ದೆ ಜೊತೆಗೆ ಸ್ವಯಂ ಉದ್ಯೋಗ ಮೆಗೂಡಿಸಿಕೊಳ್ಳಬಹುದು ಸರ್ಕಾರದ ಸೌಲಭ್ಯ ಪಡೆಯಬಹುದು ಸಮಾಜದ ಹಿರಿಯರ ಸಹಕಾರದಿಂದ ಸಮಾಜ ಮುಖಿಯಾಗಿ ಕೆಲಸ ಮಾಡಲು ಸಾಧ್ಯ ಎಂದರು ಕಂಪ್ಲಿ ತಾಲೂಕು ಬಣಜಿಗ ಸಮಾಜದ ತಾಲೂಕು ಘಟಕ ಅಧ್ಯಕ್ಷೆ ಚೈತ್ರಾ ಗಡಾದ್ಮಾತನಾಡಿ ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣ ಹೊಂದಿದಾಗ ಆರ್ಥಿಕ ಸದೃಢತೆ ಸಾಧಿಸಲು ಸಾಧ್ಯ ಎಂದರು
ಈ ಕಾರ್ಯಕ್ರಮದಲ್ಲಿ ಪೇಟೆ ಬಸವೇಶ್ವರ ಅರ್ಚಕರಾದ ಚಂದ್ರಶೇಖರ್ ಸ್ವಾಮಿ ಮುಖಂಡರಾದ ಕಲ್ಗುಡಿ ವಿಶ್ವನಾಥ ವಾಲಿ ಕೊಟ್ರ್ಪ ಗಡಾದ್ ಸಿದ್ದರಾಮಪ್ಪ ಬೂದಗುಂಪಿ ಶಿವನಂದ ಕೋರಿ ಸಣ್ಣ ಶರಣಪ್ಪ ಮುರುಗೇಂದ್ರ ಮರ್ತೂರ್ ತೆಂಗಿನಕಾಯಿ ಸಂತೋಷ ಐಕಲ್ ಸಿದ್ದಲಿಂಗೆಶ್ವರ್ ಬಾಳೆಕಾಯಿ ಚನ್ನಪ್ಪ ಉಗಾದಿ ಶಿವರಾಜ ಟಿ ಸುರೇಶ ವೀರೇಶ ಎಚ್ ಎಸ್ ಶುಭಾಷ ಜಡೆಮೂರ್ತಿ ಉಮೇಶ ಬಾಳೆಕಾಯಿ ವಿಜಯ ಕುಮಾರ ಮರಿಶೆಟ್ಟರ್ ಕೋರಿ ಶರಣಪ್ಪ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಾಲಿ ಶಕುಂತಲಾ, ಅನ್ನಪೂರ್ಣ, ವಿನೂತ ಉಗಾದಿ, ಬೂದಗುಂಪಿ ಪಾರ್ವತಮ್ಮ ಭತ್ತದ ಸಂಧ್ಯ ಸೇರಿದಂತೆ ಅನೇಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 