ಯಶಸ್ವಿಯಾಗಿ ಪೂರ್ಣಗೊಂಡ ಶಿಕ್ಷಕರ ತರಬೇತಿ ಶಿಬಿರ

ಯಶಸ್ವಿಯಾಗಿ ಪೂರ್ಣಗೊಂಡ ಶಿಕ್ಷಕರ ತರಬೇತಿ ಶಿಬಿರ Successfully completed teacher training camp

ರನ್ನಬೆಳಗಲಿ  14: 12-25-01 ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಪಟ್ಟಣದ ಢಪಳಾಪುರ ವಿದ್ಯಾ ವಿಹಾರ ಸಿಬಿಎಸ್‌ಸಿ ಶಾಲೆಯಲ್ಲಿ ದಿನಾಂಕ: 13-12-2025 ಹಾಗೂ 14-12-2025 ರಂದು ಎರಡು ದಿನಗಳ ಕಾಲ  ರಮೇಶ  ಹಾಗೂ  ರಾಘವೇಂದ್ರ ಗುರುಗಳ  ನೇತೃತ್ವದಲ್ಲಿ "ಶಿಕ್ಷಕರಿಗೆ ಅನುಭವ ಆಧಾರಿತ ಕಲಿಕೆಯ ಸಾಮರ್ಥ್ಯ  ನಿರ್ಮಾಣ" ಎಂಬ ವಿಷಯದ ಕುರಿತು ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಯಿತು . ತರಬೇತಿಯಲ್ಲಿ ಅನುಭವಾತ್ಮಕ ಕಲಿಕೆಯ ತರಬೇತಿಯ ಪ್ರಮುಖ ಅಂಶಗಳು ತರಬೇತಿಯ ಪ್ರಮುಖ ಪ್ರಯೋಜನಗಳು ಕೌಶಲ್ಯಗಳ ಅಭಿವೃದ್ಧಿ ಉತ್ತಮ ಸಿದ್ಧತೆ ಆಳವಾದ ತಿಳುವಳಿಕೆ ಹೆಚ್ಚಿದ ಆಸಕ್ತಿಯನ್ನು ತಿಳಿಸಲಾಯಿತು.  ಈ ಒಂದು ತರಬೇತಿ ಶಿಬಿರದಲ್ಲಿ  ಸಮೀರವಾಡಿ, ಮುಧೋಳ, ರಬಕವಿ,ಮುಗಳಖೋಡ, ಮೂಡಲಗಿ ಇನ್ನು ಹಲವು ಕಡೆಗಳಿಂದ ಶಿಕ್ಷಕರು ಆಗಮಿಸಿ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು.