ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಕಾರ ಗೊಳಿಸಿಕೊಳ್ಳಬೇಕು : ವಿಶ್ವನಾಥ್ ಚೌಗಳ

ವಿದ್ಯಾರ್ಥಿಗಳು ತಮ್ಮ  ಕನಸುಗಳನ್ನು ಸಕಾರ ಗೊಳಿಸಿಕೊಳ್ಳಬೇಕು : ವಿಶ್ವನಾಥ್ ಚೌಗಳ  Students should make their dreams come true: Vishwanath Chowgala


         ಯಮಕನಮರಡಿ 02:   ವಿದ್ಯಾರ್ಥಿಗಳು ತಮ್ಮ ದ್ವಿತೀಯ ವರ್ಷದ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಬೇಕು ಈಗಾಗಲೇ ವಿದ್ಯಾರ್ಥಿಗಳಿಗೆ ಸರಕಾರವು ಸಾಕಷ್ಟು ಅನುಕೂಲತೆಗಳನ್ನು ಮಾಡಿದ್ದು ಇರುತ್ತದೆ. ಸೋಲು ಗೆಲುವಿನ ಸಂಕೇತ ಪ್ರತಿಯೊಬ್ಬರು ಏಕ ಚಿತ್ತದಿಂದ  ಅಧ್ಯಯನ ಮಾಡಬೇಕು ತಮ್ಮ ಪರೀಕ್ಷೆ ಮುಗಿಯುವ ವರೆಗೆ ಟಿವಿ ಮೊಬೈಲ್ ಬಳಸುವುದನ್ನು ನಿಲ್ಲಿಸಬೇಕು ಏಕ ಚಿತ್ತದಿಂದ ಅಧ್ಯಯನ ಮಾಡಿದಲ್ಲಿ ನಿಮ್ಮ ಕನಸುಗಳು ನನಸಾಗುತ್ತವೆ. ಸಿಎಸ್ 75 ವರ್ಷ ಸುದೀರ್ಘ ಸಂಸ್ಥೆಯನ್ನು ಆಡಳಿತ ಮಂಡಳಿಯವರು ನಟಿಸಿಕೊಂಡು ಬಂದಿರುವುದು ಹೆಮ್ಮೆಪಡುವ ಸಂಗತಿಯಾಗಿದೆ ಎಂದು ಹೇಳಿದರು. ಅವರು ಸ್ಥಳೀಯ ಸಿಇಎಸ್ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಕ 20 25 26ನೇ ಸಾಲಿನ ವಿದ್ಯಾರ್ಥಿಗಳ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮೊದಲಟ್ಟಿಯ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ವಿಶ್ವನಾಥ್ ಚೌಗಳ ಮಾತನಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಆರ್ ಎಂ ಹಂದಿಗುಂದ್ ವಹಿಸಿದ್ದರು ಅದರಂತೆ ಸಂಸ್ಥೆಯ ಉಪಾಧ್ಯಕ್ಷರಾದ ವೀರಣ್ಣ ದುಗಾನಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಎಸ್ ಎಸ್ ತುಬಚಿ ವಿ ಎಸ್ ತುಬಚಿ ಆರ್ ಜಿ ತುಬಚಿ ಎಂ ವಿ ತುಬಚಿ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪಾರಿತೋಷಕ ವಿತರಣೆ ಮಾಡಲಾಯಿತು ಕಾಲೇಜಿನ ಪ್ರಾಚಾರ್ಯ ನಾಸಿಪುಡಿ ಸಂಸ್ಕೃತಿಕ ಸಂಘದ ಮುಖ್ಯಸ್ಥರಾದ ವಿಐ ದಳವಾಯಿ ಹಾಗೂ ಉಪನ್ಯಾಸಕ ಮನಗಾಂವಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕರಾದ ಎಸ್ ವಾಯ ಬನ್ನಿಗಿಡದ ಹಾಗೂ ನಿವೃತ್ತಿ ಪ್ರಾಚಾರ್ಯ ಪ್ರಕಾಶ್ ಅವಲಕ್ಕಿ ಗೌರವ ಕಾರ್ಯದರ್ಶಿ ವಿ .ಜಿ ಹಿರೇಮಠ ಉಪಸ್ಥಿತರಿದ್ದು ಕಾಲೇಜು ಉಪನ್ಯಾಸಕರಾದ ಎಬಿ ನಾಯಕ್ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಪರ ಭಾಷಣವನ್ನು ವಿಬಿನಾಶಿಪುಡಿ ಅವರು ನಡೆಸಿಕೊಟ್ಟರು ಉಪನ್ಯಾಸಕೀ ಹೊಂದಾಳಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.