ರಾಜ್ಯ ಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟಕ್ಕೆ ಆಯ್ಕೆ State level selection


ಮಾಂಜರಿ 14: ಕೆ ಎಲ್ ಇ ಶಿಕ್ಷಣ ಸಂಸ್ಥೆಯ ರಾಯಬಾಗ್ ತಾಲೂಕಿನ ಯಡ್ರಾವ ಗ್ರಾಮದಲ್ಲಿರುವ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಸನ್ 2025-26 ನೇ ಸಾಲಿನ ಚಿಕ್ಕೋಡಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ರಾಜ್ಯಮಟ್ಟಕ್ಕೆ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವ ವಿದ್ಯಾರ್ಥಿಗಳು *ನಕುಲ ಕೇಂಚೆ*( ಚಕ್ರ ಎಸೆತ ಪ್ರಥಮ ಸ್ಥಾನ ಮತ್ತು ಗುಂಡು ಎಸೆತ ದ್ವಿತೀಯ ಸ್ಥಾನ) ಹೇಮಾ ಬೆಳಸೆ ( ಎತ್ತರ ಜಿಗಿತ ಪ್ರಥಮ ಸ್ಥಾನ) ಮಲ್ಲಿನಾಥ್ ಕಲ್ಲಶೇಟ್ಟಿ ( ಎತ್ತರ ಜಿಗಿತ ದ್ವಿತೀಯ ಸ್ಥಾನ) ಪ್ರಜ್ಞಾ  ಪಡಲಾಳೆ (ತ್ರಿವಿಧ ಜಿಗಿತ ತೃತೀಯ ಸ್ಥಾನ) ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಕೆ. ಎಲ್‌. ಇ. ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಸರ್ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷರಾದ ಸತ್ಯಪ್ಪ ಬಿಷ್ಠೆ ಮತ್ತು ಪ್ರಧಾನ ಗುರುಗಳಾದ ದಯಾನಂದ ಕಬ್ಬುರೆ, ದೈಹಿಕ ಶಿಕ್ಷಕರಾದ ಎಸ್‌. ಜಿ. ಕಾಂಬಳೆ, ಎ ಎಸ್ ಮಗದ್ದುಮ್ ಹಾಗೂ ಸಿಬ್ಬಂದಿ ವರ್ಗ  ಹರ್ಷ ವ್ಯಕ್ತಪಡಿಸಿದರು.