ರಾಜ್ಯಮಟ್ಟದ ಓಪನ್ ರಾ​‍್ಯಪಿಡ್ ಚದುರಂಗ ಪಂದ್ಯಾವಳಿ ಯಶಸ್ವಿ

ರಾಜ್ಯಮಟ್ಟದ ಓಪನ್ ರಾ​‍್ಯಪಿಡ್ ಚದುರಂಗ ಪಂದ್ಯಾವಳಿ ಯಶಸ್ವಿ State level open rapid chess tournament is successful

ಕೊಪ್ಪಳ 18:  ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಓಪನ್ ರಾ​‍್ಯಪಿಡ್ ಚದುರಂಗ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ವಿಶ್ವ ಚೆಸ್ ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಓಪನ್ ರಾಪಿಡ್ ಚದುರಂಗ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು ಸಾನಿಧ್ಯವಹಿಸಿದ್ದರು. ಅನುಪಮಾ ತಾಂಬ್ರಳ್ಳಿ ಮಠ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ತ್ರಿವೇಣೀ, ಸಾತ್ವಿಕ್ ಕುಲಕರ್ಣಿ, ಶ್ರೇಯಸ್ ಕುಲಕರ್ಣಿ ಮತ್ತು ನಿವೃತ್ತ ತಹಶೀಲ್ದಾರ ಮಲ್ಲಿಕಾರ್ಜುನ ಜಾನಿಕರ್ ಹಾಗೂ ಮತ್ತಿತರಿದ್ದರು.