ರಾಣೆಬೆನ್ನೂರಲ್ಲಿ ಹೊನಲು ಬೆಳಕಿನ ರಾಜ್ಯಮಟ್ಟದ ಟೂರ್ನಮೆಂಟ್
State-level light show tournament in Ranebennur
ರಾಣೇಬೆನ್ನೂರು :10 ಇಲ್ಲಿನ ಗಂಗಾಪುರ ರಸ್ತೆಯ ಗುರುಕೊಟ್ಟೂರೇಶ್ವರ ಮಠದ ಆವರಣದಲ್ಲಿ ಇದೆ ಫೆಬ್ರವರಿ 14ರಂದು ಶನಿವಾರ ಮುಂಜಾನೆ 10 ಗಂಟೆಗೆ, ಮಹಾಶಿವರಾತ್ರಿ ಪ್ರಯುಕ್ತ ತನ್ನ 2ನೇ ವಾರ್ಷಿಕೋತ್ಸವದ ಅಂಗವಾಗಿ, ಹೊನಲು ಬೆಳಕಿನ ರಾಜ್ಯ ಮಟ್ಟದ ಲೋ ಟೆನಿಸ್ ಬಾಲ್ ಹಾಪ್ ಪಿಚ್ ಕ್ರಿಕೆಟ್ ಟೊರರ್ನಮೆಂಟ್ ಆಯೋಜಿಸಲಾಗಿದೆ ಎಂದು ಕೆಸಿಸಿ ಕ್ರಿಕೆಟ್ ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಸಿದ್ದಣ್ಣ ಚಿಕ್ಕಬಿದರಿ ಅವರು, ರಾಣೆಬೆನ್ನೂರು ಮಾಹಿಸ್ ಎಲೆವನ್ ಮತ್ತು ಕೆಸಿಸಿ ಕ್ರಿಕೆಟ್ ಕ್ಲಬ್ ಸ್ಪರ್ಧೆ ಕಳೆದ ಎರಡು ವರ್ಷಗಳಿಂದ ಆಯೋಜಿಸುತ್ತಾ ಬಂದಿದೆ ರಾಜ್ಯಮಟ್ಟದ ಈ ಪಂದ್ಯಾವಳಿಯಲ್ಲಿ ನಾಡಿನ ಅನೇಕ ಸ್ಪರ್ದಾಳುಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ನಿರ್ಣಾಯಕರು ಪಾಲ್ಗೊಳ್ಳುವ ಟೂರ್ನಮೆಂಟ್ ನಲ್ಲಿ ಎಲ್ಲ ರೀತಿಯ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ನಗದು ಮೊತ್ತ( ಪ್ರಥಮ)18,888, ದ್ವಿತೀಯ 11,111, ಮತ್ತು ತೃತೀಯ 8,888. ಬಹುಮಾನವಾಗಿ ದೊರೆಯಲಿದೆ ಅಲ್ಲದೆ ಬೆಸ್ಟ್ ಬ್ಯಾಟ್ಸ್ಮನ್, ಬೌಲರ್, ಆಲ್ ರೌಂಡರ್, ಗಳಿಗೆ ನಗದು ಬಹುಮಾನ ಆಕರ್ಷಕ ಟ್ರೋಪಿ ದೊರೆಯಲಿದೆ ಎಂದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 