ಮೂಡೂರಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶ್ರೀನಿವಾಸ ಮಾನೆ ಭೂಮಿ ಪೂಜೆ

ಮೂಡೂರಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶ್ರೀನಿವಾಸ ಮಾನೆ ಭೂಮಿ ಪೂಜೆ Srinivasa Mane Bhumi Puja for construction of CC road in Mudur

ಮೂಡೂರಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶ್ರೀನಿವಾಸ ಮಾನೆ ಭೂಮಿ ಪೂಜೆ 

ಹಾನಗಲ್ 14: ತಾಲೂಕಿನ ಮೂಡೂರು ಗ್ರಾಮದಲ್ಲಿ 2024-25 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶನಿವಾರ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು. 

    ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕನಿಷ್ಟ ಒಂದು ಕೋಟಿ ರೂ. ಅನುದಾನ ದೊರಕಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆ, ಪ್ರಗತಿ ಕಾಲೋನಿ ಅಭಿವೃದ್ಧಿ ಯೋಜನೆ ಸೇರಿದಂತೆ ನಾನಾ ಯೋಜನೆ ಮತ್ತು ಕಾರ್ಯಕ್ರಮಗಳಡಿ ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಸಿಸಿರಸ್ತೆ ಮತ್ತು ಸಿಸಿ ಗಟಾರ ನಿರ್ಮಿಸಲಾಗುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸೌಲಭ್ಯಗಳಿಂದ ವಂಚಿತವಾಗಿದ್ದ ಗ್ರಾಮಗಳಲ್ಲಿ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಸಹ ಗ್ರಾಮಸ್ಥರ ಅಪೇಕ್ಷೆಗೆ ತಕ್ಕಂತೆ ಸೌಲಭ್ಯ ದೊರಕಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಮಾನೆ ತಿಳಿಸಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಕುಂದು, ಕೊರತೆ ಆಲಿಸಿ ಸ್ಪಂದಿಸಿದರು. 

  ತಾಪಂ ಕೆಡಿಪಿ ಸದಸ್ಯ ಮಾರ್ತಾಂಡಪ್ಪ ಮಣ್ಣಮ್ಮನವರ, ಶಿರಗೋಡ ಗ್ರಾಪಂ ಉಪಾಧ್ಯಕ್ಷ ಮುಸ್ತಫಾ ಮುಜಾವರ,ಸದಸ್ಯರಾದ ಶಿವಶಂಕ್ರ​‍್ಪ ಮಾಳಮ್ಮನವರ, ಕುಮಾರ ಲಮಾಣಿ, ಮಾರ್ತಾಂಡಪ್ಪ ಕೊಂಡೋಜಿ, ಮುಖಂಡರಾದ ಜಯರಾಮ ಮಾಳಾಪೂರ, ಮಂಜುಗೌಡ ಪಾಟೀಲ,  ಮರುಳಸಿದ್ದಪ್ಪ ಕೊಂಡೋಜಿ, ಬಸವರಾಜ ಹುರುಳಿಕುಪ್ಪಿ, ಬಸವರಾಜ ಚಿಗಳಿ, ನಾಗರಾಜ ಬಕ್ಕಣ್ಣನವರ, ಮುಸ್ತಾಕ್ ದೊಡ್ಡಮನಿ, ದಾದಾಪೀರ ಬ್ಯಾಡಗಿ ಸೇರಿದಂತೆ ಅನೇಕರಿದ್ದರು.