ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ

ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ   Special prayers to God for the grace of rain

ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ   

ಲೋಕದರ್ಶನ ವರದಿ  

ಯಲಬುರ್ಗಾ 16 : ಮಂಕಾದ ಮುಂಗಾರು ಮತ್ತು ಕೈಕೊಟ್ಟ ಹಿಂಗಾರು ಮಳೆಯಿಂದ  ಜನಜೀವನ ತತ್ತರಿಸಿದೆ. ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಅನ್ನದಾತನ ಬದುಕು ಉಳಿಸಲು "ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ- ಕುಕನೂರು" ವತಿಯಿಂದ ಮಳೆಗಾಗಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.  ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಯಲಬುರ್ಗಾ ಮತ್ತು ಕುಕುನೂರ ತಾಲೂಕುಗಳಲ್ಲಿ ಮಳೆ ಯಾಗದೆ ತೀವ್ರ ಬರಗಾಲ ಉಂಟಾಗಿರುವ ಹಿನ್ನೆಲೆಯಲ್ಲಿ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಹಾಗೂ "ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ- ಕುಕನೂರು" ವತಿಯಿಂದ ಮಳೆಗಾಗಿ ವಿಶೇಷ ದೇವರಿಗೆ ವಿಶೇಷ ಪೂಜೆ ನಡೆಯಿತು. ನಂತರ 101 ಕಾಯಿಯನ್ನು ಒಡೆದು  ದೇವರಿಗೆ ಪ್ರಾರ್ಥಿಸಲಾಯಿತು. ಈ ವೇಳೆ ಡಾ.ಶಿವನಗೌಡ ದಾನರಡ್ಡಿ, ಹಂಪಯಗಯಸ್ವಾಮಿ ಹಿರೇಮಠ, ಶರಣಪ್ಪ ಗಾಂಜಿ, ಶರಣಪ್ಪ ಅರಕೇರಿ, ಮಲ್ಲು ಜಕ್ಕಲಿ, ಮಹಾಂತೇಶ ಗಾಣಿಗೇರ, ಸಂಗಮೇಶ ಗುತ್ತಿ, ಶಿವಾನಂದ ಬಣಕಾರ, ಈಶ್ವರ ಅಟಮಾಳಗಿ , ಮಂಜುನಾಥ ಬೇಲೆರಿ, ಸಾವಿತ್ರಿ ಗೊಲ್ಲರ್, ಶರಣಮ್ಮ ಪೂಜಾರ  ಸೇರಿ ಪಕ್ಷದ ಕಾರ್ಯಕರ್ತರು, ರೈತಮಿತ್ರರು ಇದ್ದರು .