ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ
Special prayers to God for the grace of rain
ವರುಣ ಕೃಪೆಗಾಗಿ ದೇವರಿಗೆ ವಿಶೇಷ ಪೂಜೆ
ಲೋಕದರ್ಶನ ವರದಿ
ಯಲಬುರ್ಗಾ 16 : ಮಂಕಾದ ಮುಂಗಾರು ಮತ್ತು ಕೈಕೊಟ್ಟ ಹಿಂಗಾರು ಮಳೆಯಿಂದ ಜನಜೀವನ ತತ್ತರಿಸಿದೆ. ಬಿತ್ತನೆ ಮಾಡಿದ ಬೆಳೆಗಳು ಒಣಗಲಾರಂಭಿಸಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಅನ್ನದಾತನ ಬದುಕು ಉಳಿಸಲು "ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ- ಕುಕನೂರು" ವತಿಯಿಂದ ಮಳೆಗಾಗಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಪಟ್ಟಣದ ಶ್ರೀಮೊಗ್ಗಿಬಸವೇಶ್ವರ ದೇವಸ್ಥಾನದಲ್ಲಿ ಯಲಬುರ್ಗಾ ಮತ್ತು ಕುಕುನೂರ ತಾಲೂಕುಗಳಲ್ಲಿ ಮಳೆ ಯಾಗದೆ ತೀವ್ರ ಬರಗಾಲ ಉಂಟಾಗಿರುವ ಹಿನ್ನೆಲೆಯಲ್ಲಿ, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಹಾಗೂ "ರೈತ ಸಂರಕ್ಷಣಾ ಸಮಿತಿ ಯಲಬುರ್ಗಾ- ಕುಕನೂರು" ವತಿಯಿಂದ ಮಳೆಗಾಗಿ ವಿಶೇಷ ದೇವರಿಗೆ ವಿಶೇಷ ಪೂಜೆ ನಡೆಯಿತು. ನಂತರ 101 ಕಾಯಿಯನ್ನು ಒಡೆದು ದೇವರಿಗೆ ಪ್ರಾರ್ಥಿಸಲಾಯಿತು. ಈ ವೇಳೆ ಡಾ.ಶಿವನಗೌಡ ದಾನರಡ್ಡಿ, ಹಂಪಯಗಯಸ್ವಾಮಿ ಹಿರೇಮಠ, ಶರಣಪ್ಪ ಗಾಂಜಿ, ಶರಣಪ್ಪ ಅರಕೇರಿ, ಮಲ್ಲು ಜಕ್ಕಲಿ, ಮಹಾಂತೇಶ ಗಾಣಿಗೇರ, ಸಂಗಮೇಶ ಗುತ್ತಿ, ಶಿವಾನಂದ ಬಣಕಾರ, ಈಶ್ವರ ಅಟಮಾಳಗಿ , ಮಂಜುನಾಥ ಬೇಲೆರಿ, ಸಾವಿತ್ರಿ ಗೊಲ್ಲರ್, ಶರಣಮ್ಮ ಪೂಜಾರ ಸೇರಿ ಪಕ್ಷದ ಕಾರ್ಯಕರ್ತರು, ರೈತಮಿತ್ರರು ಇದ್ದರು .
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 