ಸಿಧ್ಧಸಿರಿ ಬಹುರಾಜ್ಯ ಬಹು ಉದ್ದೇಶ ಸಹಕಾರ ಸಂಸ್ಥೆ:ಜಗದೇಶ ಕ್ಷೇತ್ರಿ
Siddhasiri Multi-State Multi-Purpose Cooperative Organization: Jagadesh Kshetri
ಲೋಕದರ್ಶನ ವರದಿ
ಇಂಡಿ 06: ತಾಲೂಕಿನ ನಾದ ಹಾಗೂ ತಾಂಬಾ ಗ್ರಾಮಗಳಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ 11 ಶನಿವಾರರಂದು ನಡೆಯಲಿವೆ ಎಂದು ಸಂಸ್ಥೆಯ ನಿರ್ದೇಶಕ ಜಗದೀಶ ಕ್ಷತ್ರಿ ತಿಳಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂಡಿ ತಾಲೂಕಿನಲ್ಲಿ ನಮ್ಮ ಸಂಸ್ಥೆಯ 15 ಶಾಖೆಗಳನ್ನು ಹೊಂದಿದ್ದು, ಈಗಾಗಲೆ 8 ಶಾಖೆಗಳಿಗೆ ಸ್ವಂತ ಕಟ್ಟಡಗಳಿವೆ. ಇಂಡಿ ತಾಲೂನಿನಲ್ಲಿನ ಶಾಖೆಗಳಲ್ಲಿ 484ಕೋಟಿ 88 ಲಕ್ಷ ಠೇವಣಿ ಹೊಂದಿವೆ. ಅಲ್ಲದೆ ಸಿಧ್ಧಸಿರಿಯ ಎಲ್ಲ ಶಾಖೆಗಳನ್ನು ಒಳಗೊಂಡು 5220 ಕೋಟಿ 25 ಲಕ್ಷ ರೂಪಾಯಿ ಠೇವಣಿ ಇದೆ. ರಾಜ್ಯಾದ್ಯಂತ 212 ಶಾಖೆಗಳನ್ನು ಹೊಂದಿದ್ದು, ಸಿದ್ದಸಿರಿ ಸಂಸ್ಥೆಯು ಅಂಗ ಸಂಸ್ಥೆಗಳನ್ನು ಸಹ ನಿರ್ಮಾಣ ಮಾಡಿದೆ.
ಸಿಧ್ಧಸಿರಿ ಕೋಲ್ಡ ಸ್ಟೋರೆಜ್, ಸಿದ್ದಸಿರಿ ಪವರ್ ್ಘ ಎಥೆನಾಲ್ ಘಟಕ, ಸಿಧ್ಧಸಿರಿ ಇಂಧನ ಕೇಂದ್ರ (3 ಕಡೆಗಳಲ್ಲಿ), ಸಿಧ್ಧಸಿರಿ ಕೃಷಿ ಕೇಂದ್ರಗಳು ಒಟ್ಟು ಐದು ಸಿಧ್ಧಸಿರಿ ಸಂಸ್ಥೆ ಹಾಗೂ ಸಿಧ್ಧೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ವಿಜಯಪುರ ನಗರದಲ್ಲಿ ಸಿದ್ದೇಶ್ವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ 108 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದರು.20 ವರ್ಷಗಳಿಂದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವುದಕ್ಕೆ ಮಾಜಿ ಕೇಂದ್ರ ಸಚಿವರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೂರದೃಷ್ಠಿ ಇಟ್ಟುಕೊಂಡು ಸಂಸ್ಥೆ ಬೆಳವಣಿಗೆಗೆ ಸಹಕರಿಸಿದ್ದಾರೆ.ಅಲ್ಲದೆ ಈಗಾಗಲೆ ಐದು ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 