ಪಂಚ ಗ್ಯಾರಂಟಿ ಯೋಜನೆಯ ಗೃಹಜ್ಯೋತಿ ಅಭಿನಂದನಾ ಪ್ರಶಸ್ತಿಗೆ ಸಿದ್ದಪ್ಪ ಬಿಂಜಗೇರಿ ಭಾಜನ

ಪಂಚ ಗ್ಯಾರಂಟಿ ಯೋಜನೆಯ ಗೃಹಜ್ಯೋತಿ ಅಭಿನಂದನಾ ಪ್ರಶಸ್ತಿಗೆ ಸಿದ್ದಪ್ಪ ಬಿಂಜಗೇರಿ ಭಾಜನ Siddappa Binjageri Bhajan receives the Gruha Jyoti Abhinandana Award for the Pancha Guarantee Schem


ವಿಜಯಪುರ 22:  ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ, ಬೆಂಗಳೂರು ಇವರ ಆಶ್ರಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಹೆಸ್ಕಾಂ ಅಧೀಕ್ಷಕ ಅಭಿಯಂತರರಾದ ಸಿದ್ಧಪ್ಪ ಕ. ಬಿಂಜಗೇರಿ ಇವರಿಗೆ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಮರ​‍್ಕವಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ಗೃಹಜ್ಯೋತಿ ಯೋಜನೆ ಅಡಿ ವಿಜಯಪುರ ಜಿಲ್ಲೆಗೆ ಅತ್ಯುತ್ತಮ ಸ್ಥಾನ ಲಭಿಸಿರುವುದಕ್ಕೆ ಅಭಿನಂದಿಸಿ ಅಭಿನಂದನ ಪತ್ರವು ಬೆಂಗಳೂರಿನ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್‌.ಎಮ್‌. ರೇವಣ್ಣ ಅವರು ನೀಡಿದರು. ಇದೇ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕರಾದ ಸಿ.ಎಸ್‌.ನಾಡಗೌಡ ಜಿಲ್ಲಾಧಿಕಾರಿ ಆನಂದ ಕೆ. ಉಪಸ್ಥಿತರಿದ್ದರು.