ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದ ಶಿವಾಜಿ ಜಯಂತ್ಯೋತ್ಸವ
Shivaji Jayanti celebrated with grandeur in Koppal
ಕೊಪ್ಪಳ 19 : ನಗರದ ಶಾರದಾ ಚಿತ್ರಮಂದಿರದ ಬಳಿಯ ಹಳೆ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಬುಧವಾರ ಮರಾಠ ಸಮಾಜದ ಕುಲ ನಾಯಕ ಹಾಗೂ ಹಿಂದೂ ಸಾಮ್ರಾಜ್ಯದ ಅದಿಪತಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಕೊಪ್ಪಳ ಜಿಲ್ಲಾದ್ಯಕ್ಷ ಕಳಕಪ್ಪ ಜಾದವ್ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ ಅಷ್ಟೆ ಸೀಮಿತವಾಗಿರದೆ ಅವರು ಸಮಸ್ತ ಹಿಂದೂ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಖಂಡ ಭಾರತದ ಪರಿಕಲ್ಪನೆ ಅವರ ಗುರಿಯಾಗಿತ್ತು ಎಂದರು.ವೇದಿಕೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ, ಉಪಾದ್ಯಕ್ಷ ಕ್ರಿಷ್ಟಪ್ಪ ಬಂಕದ, ತಾಲೂಕು ಅದ್ಯಕ್ಷ ನಾಗರಾಜ ಅಡ್ಯಾಳ, ಸುಭಾಶ್, ಡಾ. ನಾಗರಾಜ, ನಾಗೇಂದ್ರರಾವ್ ಸುರ್ವೆ, ಶಿವಾಜಿ ಜಾದವ್, ಗುರ್ಪ ಬೂದಗುಂಪಿ, ಸಂತೋಷ ಲೊಂಡೆ, ತಾನಾಜಿ ಮರಾಠ, ವಸಂತ ಲೊಂಡೆ,ಬಾಳಪ್ಪ ಪವಾರ್, ಉಮೇಶಬಾಬು ಸುರ್ವೆ, ಜೀಜಾಬಯಿ ಮಹಿಳಾಮಂಡಳದ ಅದ್ಯಕ್ಷೆ ಹೇಮಕ್ಕ ಮಂಗಳೂರು, ಶಿಲ್ಪಾ ಮಂಗಳೂರು, ವೀಣಾ ಲೊಂಡೆ, ಗೀತಾ ಆನಂದ, ಶಾಂತಾಬಾಯಿ ಕಮ್ಮಾರ, ಶಿಲ್ಪಾ ಚೋಪಡೆ, ಮಂಜುಳಾ ಪವಾರ್, ವಸುಂದರಾ ಜಾದವ್, ಪ್ರೇಮಾ ಓಲಿ ಮತ್ತಿತರರು ಭಾಗವಹಿಸಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 