ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದ ಶಿವಾಜಿ ಜಯಂತ್ಯೋತ್ಸವ
Shivaji Jayanti celebrated with grandeur in Koppal
ಕೊಪ್ಪಳ 19 : ನಗರದ ಶಾರದಾ ಚಿತ್ರಮಂದಿರದ ಬಳಿಯ ಹಳೆ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಬುಧವಾರ ಮರಾಠ ಸಮಾಜದ ಕುಲ ನಾಯಕ ಹಾಗೂ ಹಿಂದೂ ಸಾಮ್ರಾಜ್ಯದ ಅದಿಪತಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಕೊಪ್ಪಳ ಜಿಲ್ಲಾದ್ಯಕ್ಷ ಕಳಕಪ್ಪ ಜಾದವ್ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ ಅಷ್ಟೆ ಸೀಮಿತವಾಗಿರದೆ ಅವರು ಸಮಸ್ತ ಹಿಂದೂ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಖಂಡ ಭಾರತದ ಪರಿಕಲ್ಪನೆ ಅವರ ಗುರಿಯಾಗಿತ್ತು ಎಂದರು.ವೇದಿಕೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ, ಉಪಾದ್ಯಕ್ಷ ಕ್ರಿಷ್ಟಪ್ಪ ಬಂಕದ, ತಾಲೂಕು ಅದ್ಯಕ್ಷ ನಾಗರಾಜ ಅಡ್ಯಾಳ, ಸುಭಾಶ್, ಡಾ. ನಾಗರಾಜ, ನಾಗೇಂದ್ರರಾವ್ ಸುರ್ವೆ, ಶಿವಾಜಿ ಜಾದವ್, ಗುರ್ಪ ಬೂದಗುಂಪಿ, ಸಂತೋಷ ಲೊಂಡೆ, ತಾನಾಜಿ ಮರಾಠ, ವಸಂತ ಲೊಂಡೆ,ಬಾಳಪ್ಪ ಪವಾರ್, ಉಮೇಶಬಾಬು ಸುರ್ವೆ, ಜೀಜಾಬಯಿ ಮಹಿಳಾಮಂಡಳದ ಅದ್ಯಕ್ಷೆ ಹೇಮಕ್ಕ ಮಂಗಳೂರು, ಶಿಲ್ಪಾ ಮಂಗಳೂರು, ವೀಣಾ ಲೊಂಡೆ, ಗೀತಾ ಆನಂದ, ಶಾಂತಾಬಾಯಿ ಕಮ್ಮಾರ, ಶಿಲ್ಪಾ ಚೋಪಡೆ, ಮಂಜುಳಾ ಪವಾರ್, ವಸುಂದರಾ ಜಾದವ್, ಪ್ರೇಮಾ ಓಲಿ ಮತ್ತಿತರರು ಭಾಗವಹಿಸಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 