ಕೊಪ್ಪಳದಲ್ಲಿ ಅದ್ದೂರಿಯಾಗಿ ಜರುಗಿದ ಶಿವಾಜಿ ಜಯಂತ್ಯೋತ್ಸವ
Shivaji Jayanti celebrated with grandeur in Koppal
ಕೊಪ್ಪಳ 19 : ನಗರದ ಶಾರದಾ ಚಿತ್ರಮಂದಿರದ ಬಳಿಯ ಹಳೆ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ಬುಧವಾರ ಮರಾಠ ಸಮಾಜದ ಕುಲ ನಾಯಕ ಹಾಗೂ ಹಿಂದೂ ಸಾಮ್ರಾಜ್ಯದ ಅದಿಪತಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ನ ಕೊಪ್ಪಳ ಜಿಲ್ಲಾದ್ಯಕ್ಷ ಕಳಕಪ್ಪ ಜಾದವ್ ಮಾತನಾಡಿ, ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ ಅಷ್ಟೆ ಸೀಮಿತವಾಗಿರದೆ ಅವರು ಸಮಸ್ತ ಹಿಂದೂ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಖಂಡ ಭಾರತದ ಪರಿಕಲ್ಪನೆ ಅವರ ಗುರಿಯಾಗಿತ್ತು ಎಂದರು.ವೇದಿಕೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ, ಉಪಾದ್ಯಕ್ಷ ಕ್ರಿಷ್ಟಪ್ಪ ಬಂಕದ, ತಾಲೂಕು ಅದ್ಯಕ್ಷ ನಾಗರಾಜ ಅಡ್ಯಾಳ, ಸುಭಾಶ್, ಡಾ. ನಾಗರಾಜ, ನಾಗೇಂದ್ರರಾವ್ ಸುರ್ವೆ, ಶಿವಾಜಿ ಜಾದವ್, ಗುರ್ಪ ಬೂದಗುಂಪಿ, ಸಂತೋಷ ಲೊಂಡೆ, ತಾನಾಜಿ ಮರಾಠ, ವಸಂತ ಲೊಂಡೆ,ಬಾಳಪ್ಪ ಪವಾರ್, ಉಮೇಶಬಾಬು ಸುರ್ವೆ, ಜೀಜಾಬಯಿ ಮಹಿಳಾಮಂಡಳದ ಅದ್ಯಕ್ಷೆ ಹೇಮಕ್ಕ ಮಂಗಳೂರು, ಶಿಲ್ಪಾ ಮಂಗಳೂರು, ವೀಣಾ ಲೊಂಡೆ, ಗೀತಾ ಆನಂದ, ಶಾಂತಾಬಾಯಿ ಕಮ್ಮಾರ, ಶಿಲ್ಪಾ ಚೋಪಡೆ, ಮಂಜುಳಾ ಪವಾರ್, ವಸುಂದರಾ ಜಾದವ್, ಪ್ರೇಮಾ ಓಲಿ ಮತ್ತಿತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 