ಶರಣ್ಯ ಕಾವೇರಿ ಅವರಿಗೆ ರುದ್ರಾಕ್ಷಿ ಮಠದ ಸೇವಾರತ್ನ ಪ್ರಶಸ್ತಿ

ಶರಣ್ಯ ಕಾವೇರಿ ಅವರಿಗೆ ರುದ್ರಾಕ್ಷಿ ಮಠದ ಸೇವಾರತ್ನ ಪ್ರಶಸ್ತಿ Sharanya Kaveri receives Rudrakshi Mutt's Seva Ratna Award

ಬೆಳಗಾವಿ, 06 : ಕಾವೇರಿ ರುದ್ರ​‍್ಪ ಖಿಲಾಡಿ ಅವರು ಡಾಕ್ಟರ್ ಶಿವ ಶಿವ ಮಹಾಸ್ವಾಮಿಯವರ ಜಯಂತಿ ನಿಮಿತ್ತ ಕೊಡ ಮಾಡುವ ಪ್ರತಿಷ್ಠಿತ ಸೇವಾ ರತ್ನ ಪ್ರಶಸ್ತಿ ಭಾಜನರಾಗಿದ್ದಾರೆ. ಕಾವೇರಿ ಕಿಲಾರಿಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗೂ ಲಿಂಗಾಯತ ಮಹಿಳಾ ಸಮಾಜದ ಕಾರ್ಯದರ್ಶಿಯಾಗಿ ಜಾಗತಿಕ ಲಿಂಗಾಯತ ಮಹಿಳಾ ಘಟಕದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ನಾಗನೂರು ಶ್ರೀಮಠದ ಭಕ್ತಿಯಾಗಿ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರತಿಷ್ಠಿತ ಸೇವಾ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ಡಿಸೆಂಬರ್ 8ರಂದು ಪೂಜ್ಯ ಜಗದ್ಗುರು ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಪೂಜ್ಯ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ ಎಂಬಿ ಪಾಟೀಲ್ ಮಹಿಳಾ ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.