3 ದಿನದ ಬದಲು 6 ದಿನಗಳ ಕಾಲ ಕಲಾಪ
Session to last 6 days instead of 3 days
ಲೋಕದರ್ಶನ ವರದಿ
ಯರಗಟ್ಟಿ 04: ತಾಲೂಕಿನ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ವಾರದಲ್ಲಿ 3 ದಿನ ಮಾತ್ರ ಕೋರ್ಟ್ ಕಲಾಪ ನಡೆಯುತ್ತಿತ್ತು ಆದರೆ ಇನ್ಮುಂದೆ ವಾರದ 6 ದಿನಗಳ ಕಾಲ ಕಲಾಪ ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ ಆದರಿಂದ ಯರಗಟ್ಟಿ ಮತ್ತು ಸುತ್ತಮುತ್ತಲಿನ ಜನರಿಗೆ ದೊಡ್ಡ ಅನುಕೂಲ ಆಗಲಿದೆ. 3 ದಿನ ಮಾತ್ರ ಕೋರ್ಟ್ ಇರುವುದರಿಂದ ಪ್ರಕರಣಗಳು ವಿಳಂಬ ಆಗುತ್ತಿದ್ದವು, ವಕೀಲರು ಮತ್ತು ಕಕ್ಷಿದಾರರು ವಾರಗಟ್ಟಲೆ ಕಾಯಬೇಕಿತ್ತು. ಈಗ 6 ದಿನ ಕಲಾಪ ನಡೆದರೆ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಬೇಗ ಆಗುತ್ತೆ. ಹಾಗೂ ನ್ಯಾಯಾಧೀಶರಾಗಿ ಕೃಷ್ಣಪ್ಪ ಪಮ್ಮಾರ ಅವರನ್ನೇ ಮುಂದುವರಿಸಿದೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯ ಇದೆ. ಸಿಬ್ಬಂದಿ ಕೊರತೆ ಮತ್ತು ನ್ಯಾಯಾಧೀಶರು ಬೇರೆ ಕೋರ್ಟ್ಗೆ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರಿಂದ ಹಲವು ತಾಲೂಕು ಮಟ್ಟದ ಕೋರ್ಟ್ಗಳಲ್ಲಿ ವಾರದ 2-3 ದಿನ ಮಾತ್ರ ಕಲಾಪ ನಡೆಯುವ ಪದ್ಧತಿ ಇತ್ತು. ಉಚ್ಚ ನ್ಯಾಯಾಲಯ ಈಗ ಹಂತಹಂತವಾಗಿ ಎಲ್ಲ ಕಡೆ 6 ದಿನ ಕಲಾಪಕ್ಕೆ ಕ್ರಮ ತೆಗೆದುಕೊಂಡಿದೆ ಎಂದು ಯರಗಟ್ಟಿ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ರೆಬ್ಬನ್ನವರ ತಿಳಿಸಿದ್ದಾರೆ.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 