ಈಶ್ವರ ದೇವಸ್ಥಾನ ಸೇವಾ ಸಮಿತಿ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ 30: ಇಲ್ಲಿನ ಕಿನ್ನಾಳ ರಸ್ತೆ ಭಾಗ್ಯನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 19 ರಲ್ಲಿನ ಎನ್.ಜಿ.ಓ.ಕಾಲನಿಯಲ್ಲಿರುವ ಈಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ರವಿವಾರ ಡಿಸೆಂಬರ್ 29 ರ ಸಂಜೆ ಜರುಗಿತು. ದೇವಸ್ಥಾನ ಆವರಣದಲ್ಲಿ ನಡೆದ ಎನ್ಜಿಓ ಕಾಲನಿ ನಿವಾಸಿಗಳ ಸಭೆಯ ಮೂಲಕ ಆಯ್ಕೆ ಪ್ರಕ್ರಿಯೆ ಜರುಗಿತು. ಗೌರವಾಧ್ಯಕ್ಷರು- ಎಸ್.ಎಸ್.ಪುರಾಣಿಕಮಠ, ಅಧ್ಯಕ್ಷರು-ವೀರಣ್ಣ ಚಾಕಲಬ್ಬಿ, ಉಪಾಧ್ಯಕ್ಷರು-ಸಂಗಪ್ಪ ಹಾಲ್ಯಾಳ,ಮಂಜುನಾಥ ಡಂಬಳ, ಪ್ರಧಾನ ಕಾರ್ಯದರ್ಶಿ-ರಾಜಶೇಖರ್ ಎಸ್.ಪುರಾಣಿಕಮಠ, ಖಜಾಂಚಿ-ಪಾಲಾಕ್ಷಪ್ಪ ನಾಯಕ, ಆಂತರಿಕ ಲೆಕ್ಕಪರಿಶೋಧಕರು-ಶ್ರೀನಿವಾಸ ಸಿದ್ನೇಕೊಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರೇವಯ್ಯ ಎಸ್.ಕಾಡದೇವರಮಠ, ಮಲ್ಲಯ್ಯ ಗಾರವಾಡಮಠ, ಎಂ.ಎಸ್.ಸಜ್ಜನ್, ಮಲ್ಲಿಕಾರ್ಜುನಗೌಡ ಪಾಟೀಲ, ಐ.ಎಂ.ಚಿಕ್ಕರೆಡ್ಡಿ, ಕೆ.ಶಂಭುಲಿಂಗಪ್ಪ, ವಿ.ಹೆಚ್.ಮಂಡಸೊಪ್ಪಿ, ಗಂಗಾಧರ ಖಾನಾಪುರ, ರವಿ ಆರ್.ವಾಲ್ಮೀಕಿ, ಮಧುಸೂಧನ ಕುಲಕರ್ಣಿ, ಪಂಪನಗೌಡ ಬಲಕುಂದಿ, ಬಸಯ್ಯ ಸಾಲಿಮಠ, ರಾಘವೇಂದ್ರ ದೇಶಪಾಂಡೆ, ವಿಜಯ್ ದಿವಟರಿ್ಕರಣ ನಾಯಕ, ಚಂದ್ರಶೇಖರ ಕಳ್ಳೀಮನಿ, ವಿ.ಎಸ್.ಪಾಟೀಲ, ಮಂಜುನಾಥ ಕುಲಕರ್ಣಿ,ಅಭಿಷೇಕ ಕುಲಕರ್ಣಿ,ಗುರ್ಪ, ಬಸವರಾಜ ಎನ್.ಸವಡಿ, ಬಸಪ್ಪ ಬಂಡಿಹಾಳ, ವೀರಭದ್ರ್ಪ ಹಾಗೂ ಮಾಧ್ಯಮ ಸಂಚಾಲಕರನ್ನಾಗಿ ನಾಗರಾಜನಾಯಕ ಡಿ.ಡೊಳ್ಳಿನ ಅವರನ್ನುಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು ಈ ಪದಾಧಿಕಾರಿಗಳ ಅವಧಿಯು ಮೂರು ವರ್ಷಗಳದ್ದಾಗಿರುತ್ತದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.