ರಜತ ಪ್ರಶಸ್ತಿಗೆ ಕು.ಆರತಿ ಶಹಾಪುರ ಆಯ್ಕೆ: ಅಭಿನಂದನೆ
Selection of Ms. Aarti Shahpur for Silver Award: Congratulations
ರಜತ ಪ್ರಶಸ್ತಿಗೆ ಕು.ಆರತಿ ಶಹಾಪುರ ಆಯ್ಕೆ: ಅಭಿನಂದನೆ
ವಿಜಯಪುರ, 11; ಕನ್ನಡಿಗರ ಅಚ್ಚುಮೆಚ್ಚಿನ ಕನ್ನಡಪ್ರಭ ದಿನಪತ್ರಿಕೆ ಹಾಗೂ ನೇರ, ದಿಟ್ಟ, ನಿರಂತರ ನಿಲುವಿನ ಸುವರ್ಣನ್ಯೂಸ್ ವಾಹಿನಿ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ರಜತ ಪ್ರಶಸ್ತಿಗೆ ಜಿಲ್ಲೆಯ ಕಾಂಗ್ರೆಸ್ ಯುವ ನಾಯಕಿಯೂ ಆಗಿರುವ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರು ಭಾಜನರಾಗಿದ್ದಾರೆ.
ಇಂತಹದೊಂದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ ಕಾಂಗ್ರೆಸ್ ಯುವ ನಾಯಕಿ ಹಾಗೂ ಕಾರ್ೊರೇಟರ್ ಕು.ಆರತಿ ಶಹಾಪುರ ಅವರಿಗೆ ಜಿಲ್ಲೆಯ ಸಮಾಜ ಸೇವಕರೂ ಆಗಿರುವ ಯುವಮುಖಂಡ ಮಂಜುನಾಥ್.ಎಸ್.ಕಟ್ಟಿಮನಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.
ನಮ್ಮೆಲ್ಲರ ಹೆಮ್ಮೆಯ ಹಾಗೂ ಪ್ರೀತ್ಯಾಭಿಮಾನದ ಆತ್ಮೀಯ ಸ್ನೇಹಿತೆಯೂ ಆಗಿರುವ ಕಾಂಗ್ರೆಸ್ ಯುವ ನಾಯಕಿ ಹಾಗೂ ಮಹಾನಗರ ಪಾಲಿಕೆ ಸದಸ್ಯೆ ಕು.ಆರತಿ ಶಹಾಪುರ ಅವರಿಗೆ ಇದೇ ಫೆಬ್ರವರಿ 14ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇವರ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಮೂಲಕ ಕು.ಆರತಿ ಶಹಾಪುರ ಅವರು ಇತರ ಯುವತಿಯರಿಗೂ ಮಾದರಿಯಾಗಿದ್ದಾರೆ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯಪುರದ ಈ ಹೆಮ್ಮೆಯ ಭೀಮಪುತ್ರಿ, ಮಾದರಿ ಸಮಾಜ ಸೇವಕಿ ಹಾಗೂ ಭರವಸೆಯ ನಾಯಕಿಗೆ ಅಭಿನಂದಿಸಲು ನೀವೂ (ಮೊ:8073470615 ಸಂಖ್ಯೆಗೆ) ಕರೆ ಮಾಡಿ ಅಭಿನಂದಿಸಬಹುದು ಎಂದು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 