ವಿವಿಧ ವಿಪತ್ತುಗಳಿಂದ ರಕ್ಷಣಾತ್ಮಕ ಮುನ್ನೇಚ್ಚರಿಕಾ ಕ್ರಮದ ಕುರಿತು ವೈಜ್ಞಾನಿಕ ತಂತ್ರಜ್ಞಾನ ಪ್ರದರ್ಶನ
Scientific Technology Demonstration on Protective Precautionary Measures from Various Disasters
ವಿವಿಧ ವಿಪತ್ತುಗಳಿಂದ ರಕ್ಷಣಾತ್ಮಕ ಮುನ್ನೇಚ್ಚರಿಕಾ ಕ್ರಮದ ಕುರಿತು ವೈಜ್ಞಾನಿಕ ತಂತ್ರಜ್ಞಾನ ಪ್ರದರ್ಶನ
ಗದಗ 12 : ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಅಂತರರಾಷ್ಟ್ರೀಯ ದಿನಾಚರಣೆಯ ಸುಸಂದರ್ಭದಲ್ಲಿ, ಅವಳಿ ನಗರವಾದ ಗದಗ ಬೆಟಗೇರಿಯ ಪ್ರತಿಷ್ಟಿತ ಆಂಗ್ಲ ಮಾಧ್ಯಮ ಶಾಲೆಯಾದ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಇಂದು ವೈವಿಧ್ಯಮಯ ವಿಜ್ಞಾನ ಮತ್ತು ಗಣಿತ ಪ್ರದರ್ಶನ ಜರುಗಿತು.ಆ ಪ್ರಯುಕ್ತ ಗದಗ ಸಿ ಡಿ ಓ ಜೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಕುಮಾರಿ ಅನನ್ಯ ರಾಘವೇಂದ್ರ ಪಾಲನಕರ ಹಾಗೂ ಕುಮಾರಿ ಹರ್ಷಿತಾ ವಿನಾಯಕ ಜಾನಮನೆ ಇವರು ಜಂಟಿ ಸಹಭಾಗಿತ್ವದಲ್ಲಿ ವಿವಿಧ ನೈಸರ್ಗಿಕ ವಿಪತ್ತುಗಳಾದ ಪ್ರಳಯ, ಸುನಾಮಿ, ಚಂಡಮಾರುತ, ಭೂಕಂಪ, ರೇಲ್ವೆ ದುರಂತ, ಅಗ್ನಿ ಅವಘಡ ಇತ್ಯಾದಿ ಗಂಭೀರ ವಿಪತ್ತುಗಳಿಂದ ರಕ್ಷಣಾತ್ಮಕ ತಂತ್ರಜ್ಞಾನವನ್ನೂಳಗೊಂಡ ಕ್ರೀಯಾ ಯೋಜನೆಯನ್ನು ಪ್ರಾಯೋಗಿಕವಾಗಿ ತಯಾರಿಸಿಕೊಂಡು ಇಂದು ಬುಧವಾರ ದಿನಾಂಕ 12.2.2025 ರಂದು, ಶಾಲೆಯಲ್ಲಿ ಜರುಗಿದ ಪ್ರಾಥಮಿಕ ವಿಭಾಗದ ವಿಜ್ಞಾನ ಮತ್ತು ಗಣಿತ ಪ್ರದರ್ಶನದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡು ನೈಸರ್ಗಿಕ ವಿಕೋಪಗಳಿಂದ ರಕ್ಷಣಾತ್ಮ ಕ್ರೀಯಾ ಯೋಜನೆಯ ಕುರಿತು ಸಮಗ್ರವಾಗಿ ವೀಕ್ಷಕರಿಗೆ ವಿವರಿಸುವ ಮೂಲಕ ಗಮನ ಸೆಳೆದಿರುತ್ತಾರೆ.
.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 